ಕಾಂಗ್ರೆಸ್ ಗಾಂಧಿಗಳೆಲ್ಲ ನಕಲಿ ಗಾಂಧಿಗಳಂತೆ!

ಶುಕ್ರವಾರ, 5 ಏಪ್ರಿಲ್ 2019 (17:21 IST)
ಗೃಹ ಸಚಿವ ಎಂ.ಬಿ ಪಾಟೀಲ್ ತೀರ್ಥ ಯಾತ್ರೆಗೆ ಹೋಗಲಿ. ಹೀಗಂತ ಶಾಸಕ ತಿರುಗೇಟು ನೀಡಿದ್ದಾರೆ.

ಎಲ್ಲಾ ಬಿಟ್ಟು ಸಚಿವ ಎಂ.ಬಿ.ಪಾಟೀಲ್ ತೀರ್ಥ ಯಾತ್ರೆ ತೆರಳಲಿ ಎಂದು ವಿಜಯಪುರದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದ್ದಾರೆ.

ಪ್ರತ್ಯೇಕ ಲಿಂಗಾಯತ ಹೋರಾಟ ಮೂಲಕ ಸಚಿವ ಎಂ.ಬಿ ಪಾಟೀಲ್ ಧರ್ಮ ದ್ರೋಹ ಮಾಡಿದ್ದಾರೆ. ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಚುನಾವಣೆ ಟೈಂ ನಲ್ಲಿ ಬೇಡ ಇದನ್ನ ಇಲ್ಲಿಗೆ ಬಿಟ್ಟು ಬಿಡಿ ಅಂತಾ ಕೈ ಮುಗಿತಿದ್ದಾರೆ. ಧರ್ಮ ದ್ರೋಹ ಮಾಡಿದವರು ತೀರ್ಥ ಯಾತ್ರೆ ಮಾಡಿ ಪಾಪ ಕಳೆದುಕೊಳ್ಳಲಿ ಎಂದಿದ್ದಾರೆ ನಡಹಳ್ಳಿ.

ಕಾಂಗ್ರೆಸ್ ಗಾಂಧಿಗಳೆಲ್ಲ ನಕಲಿ ಗಾಂಧಿಗಳು ಎಂದ ಅವರು, ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ದೇಶದ ಜನರನ್ನ ಯಾಮಾರಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಲ್ಲೆ ಮೀರಿದೆ. ಮೋದಿ ಆಡಳಿತದಲ್ಲಿ ಉಗ್ರರು ಬಂದೂಕು ಹಿಡಿದು ನಾಗರಿಕರ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದು ನಡಹಳ್ಳಿ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ