ದುಬೈನಲ್ಲಿ ಮೂವರು ಭಾರತೀಯರ ದಾರುಣ ಸಾವು

ಸೋಮವಾರ, 13 ಫೆಬ್ರವರಿ 2017 (11:21 IST)
ದುಬೈ ಸರ್ಕಾರದ ಅಧಿಕಾರಿಗಳ ಮಾತನಾಡಿದ್ದು, ಅಲ್ ಅಮೀರ್ ಡೀಸೆಲ್ ಟ್ಯಾಂಕ್`ನಲ್ಲಿ ಉಸಿರಾಟದ ತೊಂದರೆಯಿಂದ ಕಿಶನ್ ಸಿಂಗ್, ಮೋಹನ್ ಸಿಂಗ್ ಮತ್ತು ಉಜೇಂದ್ರ ಸಿಂಗ್ ಮೃತಪಟ್ಟಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ಧಾರೆ.


ತನಿಖೆಯನ್ನ ಫಾಲೋ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ಮೂವರು ಭಾರತೀಯರು ಮೃತಪಟ್ಟಿರುವ ಬಗ್ಗೆ ಕಲೀಜ್ ಟೈಮ್ಸ್ ಭಾನುವಾರ ವರದಿಮಾಡಿತ್ತು.
ಇದೇವೇಳೆ, ಮೃತರ ಕುಟುಂಬ ಸದಸ್ಯರಿಗೆ ರಾಯಭಾರ ಕಚೇರಿಯಿಂದ ಎಲ್ಲ ರೀತಿಯ ನೆರವು ದೊರೆಯಲಿದೆ ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ