ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಎಣೆಯೇ ಇಲ್ಲವಾಗಿದೆ. ಸಾಮಾನ್ಯರ ಮಾತು ಬಿಡಿ, ರಕ್ಷಣೆ ಮಾಡುವವವರೇ ಇಲ್ಲಿ ಸುರಕ್ಷಿತವಾಗಿಲ್ಲ ಎಂಬುದನ್ನು ಸ್ಪಷ್ಟೀಕರಿಸುವ ಘಟನೆಯೊಂದು ರಾಜ್ಯದಲ್ಲಿ ನಡೆದಿದ್ದು ಸಶಸ್ತ್ರಧಾರಿ ಗೂಂಡಾಗಳು ಪೊಲೀಸ್ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಕೊಂದು ಹಾಕಿದ್ದಾರೆ.
ಬುಧವಾರ ತಡರಾತ್ರಿ ಬರೇಲಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಮೂವರು ದರೋಡೆಕೋರರ ಬಗ್ಗೆ ಮಾಹಿತಿ ಪಡೆದ ಸಬ್ ಇನ್ಸಪೆಕ್ಟರ್ ಸರ್ವೇಶ್ ಯಾದವ್ ಮತ್ತೆ ಕೆಲವು ಪೊಲೀಸ್ ಸಿಬ್ಬಂದಿ ಜತೆ ಅವರನ್ನು ಬಂಧಿಸಲು ತೆರಳಿದ್ದಾರೆ. ಆದರೆ ದರೋಡೆಕೋರರು ಅವರನ್ನು ಗನ್ನಿಂದ ಶೂಟ್ ಮಾಡಿದ್ದಾರೆ.