ಮೂಢನಂಬಿಕೆಯಿಂದ 5 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ

ಗುರುವಾರ, 4 ಮಾರ್ಚ್ 2021 (07:46 IST)
ತಮಿಳುನಾಡು : ಮಗ ದುರಾದೃಷ್ಟವನ್ನು ತರುತ್ತಾನೆ ಎಂಬ ಮೂಢನಂಬಿಕೆಯಿಂದ ತಂದೆಯೊಬ್ಬ 5 ವರ್ಷದ ಮಗನಿಗೆ ಬೆಂಕಿ ಹಚ್ಚಿದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ಆರೋಪಿ ಜೋತಿಷ್ಯಗಳನ್ನು ನಂಬುತ್ತಿದ್ದರು. ಇತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಜ್ಯೋತಿಷಿ ಮಗನ ಜಾತಕವನ್ನು ಪರಿಶೀಲಿಸಿ ಈತ ದುರಾದೃಷ್ಟ ತರುತ್ತಾನೆ ಎಂದು ಹೇಳಿದ್ದಾರೆ. ಹಾಗಾಗಿ ಮಗನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ