ಊಟದಲ್ಲಿ ಉಪ್ಪು ಜಾಸ್ತಿಯಾಗಿದ್ದಕ್ಕೆ ಕತ್ತು ಹಿಸುಕಿ ಕೊಂದ ಪತಿ!

ಭಾನುವಾರ, 17 ಏಪ್ರಿಲ್ 2022 (09:55 IST)
ಮುಂಬೈ : ಬೆಳಗ್ಗೆ ನೀಡಿದ್ದ ಟಿಫನ್ನಲ್ಲಿ ಉಪ್ಪು, ಖಾರ ಅಧಿಕವಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ 40 ವರ್ಷದ ಪತ್ನಿಯ ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
 
ಶುಕ್ರವಾರ ಬೆಳಗ್ಗೆ ಭಾಯಂದರ್ ಪೂರ್ವದ ಫಟಕ್ ರಸ್ತೆ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಮೃತ ದುರ್ದೈವಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ.

46 ವರ್ಷದ ಆರೋಪಿ ನಿಲೇಶ್ ಘಾಘ್ ಪತ್ನಿ ಕಿಚಡಿ ಮಾಡಿ ಬೆಳಗಿನ ಉಪಹಾರವಾಗಿ ನೀಡಿದ್ದರು. ಕಿಚಡಿಯಲ್ಲಿ ಹೆಚ್ಚು ಉಪ್ಪು ಇದ್ದಿದ್ದರಿಂದ ಕೋಪಗೊಂಡ ನಿಲೇಶ್ ಘಾಘ್ ಉದ್ದನೆಯ ಬಟ್ಟೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ನಂತರ ಘಟನೆ ಸಂಬಂಧ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಕಮಿಷನರೇಟ್ನ ಅಧಿಕಾರಿ ಮೀರಾ ಭಯಂದರ್-ವಸಾಯಿ ವಿರಾರ್ ತಿಳಿಸಿದ್ದಾರೆ. 

ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಭಯಂದರ್ನ ನವಘರ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ