ಗೋವಾದ ಮಾಪ್ಸಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್, ಪಂಜಾಬ್, ಗೋವಾ ಚುನಾವಣೆಯನ್ನೆದುರಿಸಲು ನಮ್ಮ ಬಳಿ ನಯಾ ಪೈಸೆ ಇಲ್ಲ. ನಮ್ಮ ಬ್ಯಾಂಕ್ ಖಾತೆಗಳು ಖಾಲಿ ಬಿದ್ದಿವೆ.
ಮುಂದುವರೆಸಿದ ಅವರು, ಕಳೆದೆರಡು ವರ್ಷಗಳಿಂದ ನಾವು ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಬೇಕಿದ್ದರೆ ವಾಮಮಾರ್ಗದಲ್ಲಿ ಚುನಾವಣೆಗೆ ಸಾಕಾಗುವಷ್ಟು ಹಣವನ್ನು ಕೂಡಿ ಹಾಕಬಹುದಿತ್ತು. ಆದರೆ ಜನ ನಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿ ಮತ ಹಾಕಿದ್ದಾರೆ. ನಾವು ಅವರ ನಂಬಿಕೆಗೆ ದ್ರೋಹ ಮಾಡಬಾರದು ಎಂದಿದ್ದಾರೆ.
ಪ್ರತಿಸ್ಪರ್ಧಿಗಳ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ ಅವರು, ಬಿಜೆಪಿ, ಕಾಂಗ್ರೆಸ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳ ಅಂತ್ಯದ ದಿನಗಣನೆ ಆರಂಭವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.