ವೈಮಾನಿಕ ಸಂಸ್ಥೆಗಳ ನಿಷೇಧಕ್ಕೂ ಬಗ್ಗದ ರವೀಂದ್ರ ಗಾಯಕ್ವಾಡ್

ಶುಕ್ರವಾರ, 24 ಮಾರ್ಚ್ 2017 (13:38 IST)
ನಿನ್ನೆ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್`ಗೆ ವೈಮಾನಿಕ ಸಂಸ್ಥೆಗಳು ನಿಷೇಧ ಹೇರಿವೆ. ಯಾವುದೇ ವಿಮಾನದಲ್ಲೂ ಸಂಸದ ರವೀಂದ್ರ ಗಾಯಕ್ವಾಡ್ ಪ್ರಯಾಣಕ್ಕೆ ಅವಕಾಶ ನೀಡಬಾರದೆಂದು ಭಾರತೀಯ ವೈಮಾನಿಕ ಸಂಸ್ಥೆಗಳ ಒಕ್ಕೂಟ ನಿಷೇಧ ಹೇರಿದೆ.

ಇದು ಕಷ್ಟಪಟ್ಟು ದುಡಿಯುವ ನೌಕರರ ಪ್ರಶ್ನೆಯಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಹಲ್ಲೆ ನಡೆಸಿರುವ ಗಾಯಕ್ವಾಡ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒಕ್ಕೂಟ ಪೊಲೀಸ್ ಇಲಾಖೆಯನ್ನ ಒತ್ತಾಯಿಸಿದೆ.

ಈ ಕುರಿತು, ಪ್ರತಿಕ್ರಿಯಿಸಿರುವ ಗಾಯಕ್ವಾಡ್, ನವದೆಹಲಿಯಿಂದ ಪುಣೆಗೆ ತೆರಳಲು ನನ್ನ ಬಳಿ ಟಿಕೆಟ್ ಇದೆ. ಸಂಜೆ ವಿಮಾನದಲ್ಲೇ ಪ್ರಯಾಣಿಸುತ್ತೇನೆ. ಯಾರೂ ನನ್ನನ್ನ ತಡೆಯಲು ಸಾಧ್ಯವಿಲ್ಲ.ಎಂದು ಹೇಳಿದ್ದಾರೆ.
ಗಾಯ್ಕವಾಡ್ ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ದುರ್ವರ್ತನೆ ತೋರಿದ ಪ್ರಯಾಣಿಕರ ಮರುಪ್ರಯಾಣವನ್ನ ರದ್ದು ಮಾಡುವ ಅಧಿಕಾರ ನಮಗಿದೆ ಎಂದು ಹೇಳಿದೆ.  

ವೆಬ್ದುನಿಯಾವನ್ನು ಓದಿ