ದೆಹಲಿ, ಮುಂಬೈ ಮೇಲೆ ಆತ್ಮಾಹುತಿ ದಾಳಿ: ಅಲ್‌ ಖೈದಾ ಎಚ್ಚರಿಕೆ

ಬುಧವಾರ, 8 ಜೂನ್ 2022 (14:22 IST)
ಮುಸ್ಲಿಮ ಪ್ರವಾದಿ ನಿಂದನೆ ವಿವಾದಕ್ಕೆ ಕೆರಳಿರುವ ಅಲ್‌ ಖೈದಾ ದೆಹಲಿ ಹಾಗೂ ಮುಂಬೈ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಬಿಜೆಪಿಯ ಮುಖಂಡರು ಪ್ರವಾದಿ ವಿರುದ್ಧ ಟೀಕೆ ಮಾಡುತ್ತಿರುವ ಬಗ್ಗೆ ಅಲ್‌ ಖೈದಾ ಬೆದರಿಕೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು, ಪ್ರವಾದಿ ಗೌರವಕ್ಕಾಗಿ ಹೋರಾಟ ನಡೆಸಲು ಸಜ್ಜಾಗಿದ್ದು, ನಮ್ಮವರು ತಮ್ಮನ್ನು ತಾವೇ ಸ್ಫೋಟಿಸಿಕೊಳ್ಳಲು  ಸಜ್ಜಾಗಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಮುಂಬೈ ಗುಜರಾತ್‌ ಮೇಲೆ ದಾಳಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೇಸರಿ ಭಯೋತ್ಪಾದಕರು ದೆಹಲಿ, ಮುಂಬೈ, ಗುಜರಾತ್‌, ಉತ್ತರ ಪ್ರದೇಶ ಮತ್ತು ಗುಜರಾತ್‌ ಗಳಲ್ಲಿ ತಮ್ಮ ಅಂತ್ಯವನ್ನು ಎದುರು ನೋಡುತ್ತಿದ್ದಾರೆ. ಅವರು ತಮ್ಮದೇ ಮನೆ ಅಥವಾ ಮನೆಯಲ್ಲಿ ಹತ್ಯೆ ಆಗುತ್ತಾರೆ ಹೊರತು ಸೈನಿಕರ ಜಾಗದಲ್ಲಿ ಅಲ್ಲ ಎಂದು ಅಲ್‌ ಖೈದಾ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ