ಆಂಫನ್ ಚಂಡಮಾರುತ ಭೀತಿ: ಒರಿಸ್ಸಾ, ಪ.ಬಂಗಾಲ ಕರಾವಳಿಯಲ್ಲಿ ಹೈ ಅಲರ್ಟ್

ಮಂಗಳವಾರ, 19 ಮೇ 2020 (09:46 IST)
ನವದೆಹಲಿ: ಕೊರೋನಾ ಮಹಾಮಾರಿಯ ನಡುವೆ ದೇಶದಲ್ಲಿ ಆಂಫನ್ ಚಂಡಮಾರುತ ಭೀತಿ ಎದುರಾಗಿದೆ. ಒಡಿಶಾ, ಪ. ಬಂಗಾಲ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.


ಈಗಾಗಲೇ ಕರಾವಳಿ ಭಾಗದಲ್ಲಿ ಎನ್ ಡಿಆರ್ ಎಫ‍್ ಸಿಬ್ಬಂದಿಯನ್ನು ಪರಿಸ್ಥಿತಿ ಎದುರಿಸಲು ನಿಯೋಜಿಸಲಾಗಿದೆ. ಒಡಿಶಾ, ಪ.ಬಂಗಾಲ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತದ ಪರಿಣಾಮ ಈಗಾಗಲೇ ಕರ್ನಾಟಕ, ಕೇರಳದಲ್ಲೂ ಮಳೆಯಾಗುತ್ತಿದ್ದು, ಇದು ಇನ್ನೂ ಎರಡು ದಿನ ಮುಂದುವರಿಯುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ