ತಮಿಳುನಾಡಿಗೆ ಮತ್ತೊಬ್ಬ ಸಿಎಂ?

ಗುರುವಾರ, 24 ಆಗಸ್ಟ್ 2017 (14:24 IST)
ಚೆನ್ನೈ:  ಎಐಎಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜನತೆಗೆ ಮೂವರು ಸಿಎಂ ನೋಡುವ ಭಾಗ್ಯ ಸಿಕ್ಕಿದೆ. ಇದೀಗ ನಾಲ್ಕನೇ ಹೆಸರು ಕೇಳಿಬರುತ್ತಿದೆ.

 
ಸದ್ಯ ಸಿಎಂ ಆಗಿರುವ ಎಡಪ್ಪಾಡಿ ಪಳನಿ ಸ್ವಾಮಿ ಶಶಿಕಲಾ ನಟರಾಜನ್ ಬಣವನ್ನು ಹೊರದಬ್ಬಿ ಪನೀರ್ ಸೆಲ್ವಂ ಜತೆ ಕೈಜೋಡಿಸಿರುವುದು ಮತ್ತೊಮ್ಮೆ ತಮಿಳುನಾಡಿನ ರಾಜಕೀಯವನ್ನು ರಂಗೇರಿಸಿದೆ.

ಶಶಿಕಲಾ ಆಪ್ತ ಟಿಟಿ ದಿನಕರನ್ ನೇತೃತ್ವದಲ್ಲಿ ಇನ್ನೊಂದು ರಾಜಕೀಯ ಗುದ್ದಾಟಕ್ಕೆ ವೇದಿಕೆ ಸಿದ್ದವಾಗಿದ್ದು, ಎಡಪ್ಪಾಡಿ ಬದಲಿಗೆ ಪಿ ಧನಪಾಲನ್ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಸಿದ್ಧತೆ ನಡೆದಿದೆ.

ತಮಿಳುನಾಡು ಸಿಎಂ ಆಗಿ ಸದ್ಯ ಸ್ಪೀಕರ್ ಆಗಿರುವ ಧನಪಾಲ್ ಅವರನ್ನು ನೇಮಿಸಬೇಕು ಎಂದು ದಿನಕರನ್ ಬೆಂಬಲಿಗ ವೆಟ್ರಿವೇಲ್ ಪತ್ರಿಕಾಗೋಷ್ಠಿಯಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ. ತಮಿಳುನಾಡಿನ  ಈ ರಾಜಕೀಯ ಅತಂತ್ರ ಸ್ಥಿತಿ ಇನ್ನೆಷ್ಟು ದಿನ ಮುಂದುವರಿಯುತ್ತೋ ಕಾದು ನೋಡಬೇಕು.

ಇದನ್ನೂ ಓದಿ.. ದಾಖಲೆಯ ಪಂದ್ಯದಲ್ಲೇ ಶ್ರೀಲಂಕಾಗೆ ಮೊದಲ ಆಘಾತ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ