ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಆದೇಶ ರದ್ದು ಪಡಿಸಿದ್ದ ಹಿನ್ನೆಲೆಯಲ್ಲಿ ಖೇಮ್ಕಾ ವಿರುದ್ಧ ಈ ಹಿಂದೆ ಹರಿಯಾಣಾದಲ್ಲಿದ್ದ ಕಾಂಗ್ರೆಸ್ ಸರ್ಕಾರ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ ಆರೋಪ ಹೊರಿಸಿ ಚಾರ್ಜ್ಶೀಟ್ ದಾಖಲಿಸಿತ್ತು. ಕಳೆದ ನವೆಂಬರ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಈ ಆರೋಪಪಟ್ಟಿಯನ್ನು ರದ್ದುಗೊಳಿಸಿತ್ತು. ವಿಚಿತ್ರವೆಂದರೆ ಅದೇ ಬಿಜೆಪಿ ಸರ್ಕಾರ ಅವರ ಮೇಲೀಗ ಆರೋಪ ಪಟ್ಟಿ ದಾಖಲಿಸಿದೆ.