ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

Krishnaveni K

ಸೋಮವಾರ, 16 ಜೂನ್ 2025 (10:16 IST)
Photo Credit: X
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ತಮ್ಮವರ ಮೃತದೇಹ ಪಡೆಯಲು, ಗಾಯಗೊಂಡವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದವರಿಗೆ ಆರ್ ಎಸ್ಎಸ್ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಬಾಂಧವರೂ ಅದಕ್ಕೆ ಸಾಥ್ ನೀಡಿದ್ದಾರೆ.

ವಿಮಾನ ದರುಂತವಾದ ಸಂದರ್ಭದಲ್ಲಿ ಆರ್ ಎಸ್ಎಸ್ ಕಾರ್ಯಕರ್ತರು ಸ್ಥಳಕ್ಕೆ ಬಂದು ರಕ್ಷಣಾ ಸಿಬ್ಬಂದಿಗಳ ಜೊತೆ ಕೈ ಜೋಡಿಸಿದ್ದರು. ಇನ್ನು, ಕೆಲವರು ಕುಡಿಯುವ ನೀರಿನ ಬಾಟಲಿ ಹಂಚಿಕೊಳ್ಳುತ್ತಿದ್ದುದು ಕಂಡುಬಂದಿತ್ತು.

ಇದೀಗ ಆಸ್ಪತ್ರೆಯಲ್ಲಿ ತಮ್ಮವರ ಮೃತದೇಹ ಪಡೆಯಲು ಮತ್ತು ಗಾಯಾಳುಗಳ ಆರೈಕೆ ಮಾಡಲು ಕುಟುಂಬಸ್ಥರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲಾ ಆರ್ ಎಸ್ಎಸ್ ಕಾರ್ಯಕರ್ತರು ಊಟ, ಕುಡಿಯುವ ನೀರು ನೀಡುತ್ತಿದ್ದಾರೆ.

ಜೊತೆಗೆ ಕೆಲವು ಮುಸ್ಲಿಂ ಬಾಂಧವರೂ ಈ ಕಾರ್ಯ ಮಾಡುತ್ತಿದ್ದಾರೆ. ಅಲ್ಲಿರುವ ಮಾಧ್ಯಮ ಸಿಬ್ಬಂದಿಗಳು, ಕುಟುಂಬಸ್ಥರು, ಪೊಲೀಸರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕೋಮು ಸೌಹಾರ್ದತೆಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ