ಭಾರತ ಗೆದ್ದದ್ದನ್ನ ಸಹಿಸದ ದೇಶದ್ರೋಹಿಗಳು ಕಾಶ್ಮೀರದಲ್ಲಿ ಮಾಡಿದ್ದೇನು ಗೊತ್ತಾ..?

ಮಂಗಳವಾರ, 6 ಜೂನ್ 2017 (08:45 IST)
ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ತಂಡದ ಗೆಲುವನ್ನ ಇಡೀ ದೇಶವೇ ಸಂಭ್ರಮಿಸುತ್ತಿದೆ. ಆದರೆ, ಕಾಶ್ಮೀರದಲ್ಲಿ ಮಾತ್ರ ಪರಿಸ್ಥಿತಿ ಬೇರೆಯಾಗಿದೆ.
 

ಪಾಕಿಸ್ತಾನ ಸೋಲುತ್ತಿದ್ದಂತೆ  ಎನ್ಐಟಿ ವಿದ್ಯಾಸಂಸ್ಥೆಯ ವೆಬ್ ಸೈಟ್ ಹ್ಯಾಕ್ ಮಾಡಿರುವ ದೇಶದ್ರೋಹಿಗಳು ಆಜಾದ್ ಕಾಶ್ಮೀರ ಎಂಬ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಟಿ-20 ವಿಶ್ವಕಪ್`ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತಾಗ ಕಾಶ್ಮೀರಿಗಳು ಮತ್ತು ಕಾಶ್ಮೀರೇತರರ ಘರ್ಷಣೆಗೆ ಸಾಕ್ಷಿಯಾಗಿದ್ದ ಎನ್`ಐಟಿ ಕ್ಯಾಂಪಸ್ ಈಗ ಮತ್ತೊಂದು ದೇಶ ವಿರೋಧಿ ಚಟುವಟಿಕೆಗೆ ಸಾಕ್ಷಿಯಾಗಿದೆ.

ಅಷ್ಟೇ ಅಲ್ಲ, ವೆಬ್ ಸೈಟ್`ನಲ್ಲಿ `ಹಾಲು ಕೇಳಿದರೆ ಸಿಹಿ ಕೊಡುತ್ತೇವೆ. ಕಾಶ್ಮೀರ ಕೇಳಿದರೆ ಕೊಲ್ಲುತ್ತೇವೆ ಎಂದೂ ಸಹ ಬರೆಯಲಾಗಿದೆ. ವಿದ್ಯಾರ್ಥಿಗಳಿ ಸಿಲಬಸ್ ಕುರಿತ ಮಾಹಿತಿ ನೋಡಲು ವೆಬ್ ಸೈಟ್ ತೆರೆದಾಗ ಅಕ್ಷರಶಃ ಶಾಕ್ ಆಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದ ಕೇವಲ ಗಡಿಗೆ ಮಾತ್ರ ಮೀಸಲಾಗಿಲ್ಲ. ಕ್ರಿಕೆಟ್ ಪಂದ್ಯವೂ ಸಹ ಇದರ ಮೇಲೆ ಪರಿಣಾಮ ಬೀರುತ್ತಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ