ಮಹಾರಾಷ್ಟ್ರ ಮುಖ್ಯಮಂತ್ರಿ ನೋಟು ನಿಷೇಧದ ಪರವಾಗಿದ್ದಾರೆಯೋ ಅಥವಾ ಅಸಹಾಯಕ ಮಹಿಳೆಯ ಪರವಾಗಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ, ಸರಕಾರ ಮಹಿಳೆಯ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳದಿದ್ದಲ್ಲಿ ಇಂತಹ ಕಿವುಡ ಸರಕಾರ 10 ಸಾವಿರ ವರ್ಷಗಳ ಹಿಂದೆಯೂ ಅಸ್ತಿತ್ವದಲ್ಲಿರಲಿಲ್ಲ ಎನ್ನಬೇಕಾಗುತ್ತದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಕಟಿಸಿದೆ.
ನವದೆಹಲಿಯ ರಸ್ತೆಯಲ್ಲಿ ಮಹಿಳೆಯೊಬ್ಬಳು ನಗ್ನಳಾಗಿ ಸರಕಾರವನ್ನು ಟೀಕಿಸುತ್ತಿದ್ದಾಳೆ ಎಂದರೆ, ಇದೊಂದು ಸರಕಾರವೇ ಪ್ರಾಯೋಜಿಸಿದ ನಿರ್ಭಯಾ ದುರಂತವಾಗಿದೆ ಎಂದು ಕಿಡಿಕಾರಿದೆ.ದೇಶಾದ್ಯಂತ ಘಟನೆಯ ಬಗ್ಗೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ ಎಂದು ಲೇಖನದಲ್ಲಿ ಪ್ರಕಟಿಸಿದೆ.
ಒಂದು ವೇಳೆ, ಮಹಿಳೆಯ ವರ್ತನೆಯನ್ನು ರಾಷ್ಟ್ರಭಕ್ತಿ ಎಂದು ನೀವು ಭಾವಿಸುವುದಾದಲ್ಲಿ ನಿಮ್ಮ ಮೆದುಳಿಗೆ ಚಿಕಿತ್ಸೆ ನೀಡಲು ತಾಲಿಬಾನ್ ವೈದ್ಯರೇ ಸೂಕ್ತ. ಯಾಕೆಂದರೆ, ಇಂತಹ ಘಟನೆಗಳು ತಾಲಿಬಾನ್ ಅಡಳಿತವಿರುವ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತವೆ ಎಂದು ಶಿವಸೇನೆ ಮೋದಿ ಸರಕಾರದ ವಿರುದ್ಧ ಗುಡುಗಿದೆ.