ಹಿಂದುತ್ವ ಉಳಿಸಲು ಐವರು ಮಕ್ಕಳನ್ನು ಹೆರಲು ಸಲಹೆ ಕೊಟ್ಟ ಬಿಜೆಪಿ ನಾಯಕ

ಗುರುವಾರ, 26 ಜುಲೈ 2018 (09:49 IST)
ನವದೆಹಲಿ: ಹಿಂದುತ್ವ ತತ್ವ ಉಳಿಯಬೇಕಾದರೆ ಹಿಂದೂ ದಂಪತಿ ಕನಿಷ್ಠ ಐವರು ಮಕ್ಕಳನ್ನು ಹಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಐಡಿಯಾ ಕೊಟ್ಟಿದ್ದಾರೆ.

ಹಿಂದುತ್ವ ತತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಹಿಂದೂ ದಂಪತಿ ಕನಿಷ್ಠ ಐವರು ಮಕ್ಕಳನ್ನು ಹೊಂದಿ ಹಿಂದೂಗಳ ಜನ ಸಂಖ್ಯೆ ಹೆಚ್ಚಿಸಬೇಕು ಎಂದು ಸುರೇಂದ್ರ ಸಿಂಗ್ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಶ್ರೀರಾಮ ಚಂದ್ರನೇ ಬಂದರೂ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ  ತಡೆಯಲು ಸಾಧ್ಯವಿಲ್ಲ ಎಂದು ಸುರೇಂದ್ರ ಸಿಂಗ್ ಹೇಳಿಕೆ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ