ಬಿಜೆಪಿ-ಆರೆಸ್ಸೆಸ್‌ನದ್ದು ದ್ವೇಷ ಮತ್ತು ಹಿಂಸೆಯ ಸಿದ್ಧಾಂತ- ರಾಹುಲ್ ಗಾಂಧಿ

ಬುಧವಾರ, 27 ಫೆಬ್ರವರಿ 2019 (08:16 IST)
ಅಸ್ಸಾಂ : ಈಶಾನ್ಯ ರಾಜ್ಯಗಳಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಯನ್ನು ರಕ್ಷಣೆ ಮಾಡುವುದಾಗಿ ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.


ಅಸ್ಸಾಂನಲ್ಲಿ ಬೃಹತ್‌ ‍ರ್ಯಾಲಿ ಮೂಲಕ ಕಾಂಗ್ರೆಸ್‌ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ‘ಈಶಾನ್ಯದ ಎಲ್ಲ ರಾಜ್ಯಗಳ ಮೇಲೂ ಮೋದಿ ಸರಕಾರ 'ನಾಗ್ಪುರ ಸಿದ್ಧಾಂತ' (ಆರೆಸ್ಸೆಸ್‌) ಹೇರಿಕೆ ಮಾಡಲಾಗುತ್ತಿದೆ ‘ಎಂದು ಆರೋಪಿಸಿದ್ದಾರೆ.


ಅಲ್ಲದೇ ‘ಬಿಜೆಪಿ-ಆರೆಸ್ಸೆಸ್‌ನದ್ದು ದ್ವೇಷ ಮತ್ತು ಹಿಂಸೆಯ ಸಿದ್ಧಾಂತ. ಕಾಂಗ್ರೆಸ್‌ನದ್ದು ಪ್ರೀತಿ ಮತ್ತು ಸಹನೆಯ ಸಿದ್ಧಾಂತ. ಅವರ ಸಿದ್ಧಾಂತವು ಈಶಾನ್ಯ ಭಾರತದ ಪ್ರತಿ ರಾಜ್ಯವನ್ನೂ ಸುಟ್ಟುಹಾಕುತ್ತಿದೆ. ಇಲ್ಲಿನ ಜನರ ಜೀವನಶೈಲಿ, ಸಂಸ್ಕೃತಿ, ಭಾಷೆ ಮತ್ತು ಇತಿಹಾಸದ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ