ಸಿಎಎಯಿಂದ ಭಾರತೀಯರಿಗೆ ತೊಂದರೆಯಾಗುತ್ತದೆ ಎಂದು ಸಾಬೀತುಪಡಿಸಿದವರಿಗೆ ಬಂಪರ್ ಆಫರ್

ಬುಧವಾರ, 5 ಫೆಬ್ರವರಿ 2020 (07:11 IST)
ತಮಿಳುನಾಡು : ಸಿಎಎ ಕಾಯ್ದೆಯಿಂದ ಭಾರತೀಯರಿಗೆ ಸಮಸ್ಯೆಯಾಗುತ್ತದೆ ಎಂದು ಸಾಬೀತು ಪಡಿಸಿದವರಿಗೆ 1ಕೋಟಿ ರೂ. ಬಹುಮಾನ ನೀಡುವುದಾಗಿ ವಕೀಲರೊಬ್ಬರು ಚಾಲೇಂಜ್ ಮಾಡಿದ್ದಾರೆ.


ತಮಿಳುನಾಡಿನ ಬಿಜೆಪಿಯ ಲಿಗಲ್ ಸೇಲ್ ನ ಜಿಲ್ಲಾ ಕಾರ್ಯದರ್ಶಿಯಾಗಿರುವ ಕೆ.ತಂಗವೇಲ್ ಅವರು ಈ ರೀತಿಯ ಚಾಲೆಂಜ್ ಮಾಡಿದ್ದು, ಸಿಎಎಯಿಂದ ಭಾರತೀಯರಿಗೆ ತೊಂದರೆಯಾಗುತ್ತದೆ ಎಂದು ಯಾವುದಾದರೂ ದಾಖಲೆಯ ಸಮೇತ ಸಾಬೀತುಪಡಿಸಿದರೆ 1ಕೋಟಿ ರೂ. ಬಹುಮಾನ ನೀಡುವುದಾಗಿ ಭಿತ್ತಿಪತ್ರಗಳನ್ನು ಹೊರಡಿಸಿದ್ದಾರೆ.


ಅಕ್ರಮ ವಲಸಿಗರನ್ನು ತಡೆಯಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆದರೆ ಇದು ಭಾರತೀಯರಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಹಲವರು ಇದಕ್ಕೆ ವಿರೋಧ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ