ಕುಂಭಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ವಿಚಾರ; ಟ್ವೀಟರ್ ನಲ್ಲಿ ಪ್ರಧಾನಿ ಮೋದಿ ಕಾಲೆಳೆದ ಗಣೇಶ್ ಹುಕ್ಕೇರಿ

ಸೋಮವಾರ, 25 ಫೆಬ್ರವರಿ 2019 (12:12 IST)
ನವದೆಹಲಿ : ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಟ್ವೀಟರ್ ನಲ್ಲಿ ಪ್ರಧಾನಿ ಮೋದಿಯ ಬಗ್ಗೆ ಲೇವಡಿ ಮಾಡಿದ್ದಾರೆ.


ನಿನ್ನೆ ಉತ್ತರ ಪ್ರದೇಶದ ಕುಂಭಮೇಳಕ್ಕೆ ಆಗಮಿಸಿದ  ಪ್ರಧಾನಿ ಮೋದಿ ಅವರು ಸ್ವಚ್ಛ ಕುಂಭ, ಸ್ವಚ್ಛ ಆಭಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲವು ಸಫಾಯಿ ಕರ್ಮಚಾರಿಗಳ ಪಾದಗಳನ್ನು ತೊಳೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.


ಈ ಬಗ್ಗೆ ಟ್ವೀಟರ್ ನಲ್ಲಿ ಪ್ರಧಾನಿ ಮೋದಿ ಅವರ ಕಾಲೆಳೆದ ಗಣೇಶ್ ಹುಕ್ಕೇರಿ  ಅವರು, ‘ಮೋದಿಯವರಿಗೆ ಇಂತಹ ಯೋಚನೆ ಮಾತ್ರ ಏಕೆ ಬರುತ್ತದೆ. ಅದು ಚುನಾವಣೆ ವೇಳೆ ಮಾತ್ರ ಏಕೆ ಬರುತ್ತದೆ ಮೋದಿಯವರೇ? ಸಾಮಾನ್ಯ ಜನ ನಿಮ್ಮ ಇಂತಹ ನಾಟಕಗಳಿಂದ ಎಚ್ಚೆತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ