ಕೆಲಸ ಮಾಡದ ಅಧಿಕಾರಿಗಳಿಗೆ ರಿಟೈರ್ ಮೆಂಟ್ ಯೋಗ ಕರುಣಿಸಿದ ಸಿಎಂ ಯೋಗಿ

ಸೋಮವಾರ, 11 ಸೆಪ್ಟಂಬರ್ 2017 (10:09 IST)
ಲಕ್ನೋ: ಹಲವು ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಕೆಲಸ ಮಾಡದ ಅಧಿಕಾರಿಗಳು ಇನ್ನು ಉತ್ತರ ಪ್ರದೇಶದಲ್ಲಿ ಆರಾಮವಾಗಿರಲು ಸಾಧ್ಯವಿಲ್ಲ.

 
ಕೆಲಸ ಮಾಡದ, ನಾಲಾಯಕ್ ಅಧಿಕಾರಿಗಳಿಗೆ ಸಿಎಂ ಯೋಗಿ ರಿಟೈರ್ ಮೆಂಟ್ ನೀಡಲಿದ್ದಾರೆ. ಇದಕ್ಕಾಗಿ ಸಿಎಂ ಯೋಗಿ, ಭ್ರಷ್ಟ, ಕೆಲಸ ಮಾಡದ ಸೋಮಾರಿ ಅಧಿಕಾರಿಗಳ ಪಟ್ಟಿ ತಯಾರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಾಲಯಗಳಿಗೆ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಪತ್ರ ಬರೆದಿದ್ದು, ಅಂತಹ ಅಧಿಕಾರಿಗಳನ್ನು ಪಟ್ಟಿ ಮಾಡಿಕೊಡಲು ತಯಾರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಅಂತಹ ಅಧಿಕಾರಿಗಳಿಗೆ ಇನ್ನು ಕಡ್ಡಾಯ ನಿವೃತ್ತಿ ಸಿಗಲಿದೆ.

ಇದನ್ನೂ ಓದಿ.. ರಾಷ್ಟ್ರೀಯ ತಂಡಕ್ಕೆ ಮತ್ತೊಂದು ಹೆಜ್ಜೆ ಇಟ್ಟ ಸಚಿನ್ ಪುತ್ರ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ