ದೆಹಲಿಯಲ್ಲಿ ಇಂದು ಜಿಎಸ್ ಟಿ ತೆರೆಗೆ ಸಮಿತಿ ಸಭೆ

ಶುಕ್ರವಾರ, 12 ಜೂನ್ 2020 (10:51 IST)
ನವದೆಹಲಿ : ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ಜಿಎಸ್ ಟಿ ತೆರೆಗೆ ಸಮಿತಿ ಸಭೆ ಕರೆಯಲಾಗಿದೆ.


ಈ ಸಭೆ ಬಳಿಕ  ಮೋದಿ ಸರ್ಕಾರದಿಂದ ಮತ್ತೊಂದು ನೆರವು ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಈ ಸಭೆಯಲ್ಲಿ ಜನ್ ಧನ್ ಖಾತೆಗೆ ಮತ್ತೆ ಹಣ ಹಾಕೋ ಸಾಧ್ಯತೆ, ಮತ್ತೆ 3 ತಿಂಗಳವರೆಗೆ ಖಾತೆಗೆ ಹಣ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.


ಅಲ್ಲದೇ  ನರೇಗಾ ಅಡಿಯಲ್ಲಿ ದಿನಗೂಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹಾಗೇ ತವರಿಗೆ ವಾಪಾಸ್ಸಾಗಿರುವ ಕಾರ್ಮಿಕರಿಗೆ ನೆರವು ನೀಡುವ ಸಾಧ್ಯತೆಯಿದ್ದು,  ಕೆಲವೇ ದಿನಗಳಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ