ಅಯೋಧ್ಯೆಯ ಆಹ್ವಾನ ತಿರಸ್ಕರಿಸಿ ಕಾಂಗ್ರೆಸ್ ರಾಮನನ್ನು ಅವಮಾನಿಸಿದೆ: ಮೋದಿ

Sampriya

ಮಂಗಳವಾರ, 9 ಏಪ್ರಿಲ್ 2024 (17:29 IST)
Photo Courtesy Facebook
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ತಡೆಯಲು ಕಾಂಗ್ರೆಸ್ ಹಲವು ಪ್ರಯತ್ನ ಮಾಡಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ ಅವರು ಪ್ರಾಣ ಪ್ರತಿಷ್ಠೆಯ ಆಹ್ವಾನ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ರಾಮನನ್ನು ಅವಮಾನಿಸಿದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣದ ಕೆಸರುಗದ್ದೆಯಲ್ಲಿ ಮುಳುಗಿದೆ.

"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದಂತೆ ಕಾಂಗ್ರೆಸ್ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ದೇಶದ ಪ್ರತಿಯೊಬ್ಬರ ಕೊಡುಗೆ ಮೂಲಕ ಇಂದು ಸುಂದರವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಜನರು ಅದನ್ನೆಲ್ಲ ಮರೆತು ರಾಮಲಲ್ಲಾನ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಅವರನ್ನು ಆಹ್ವಾನಿಸಿದ್ದು, ಅದನ್ನು ತಿರಸ್ಕರಿಸುವ ಮೂಲಕ  ಶ್ರೀರಾಮನನ್ನು ಅವಮಾನಿಸಿದ್ದೀರಿ. ಅದಲ್ಲದೆ ಭಾಗವಹಿಸಿದ ಕೈ ನಾಯಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಹೊರಹಾಕಿದ್ದೀರಿ ಎಂದು ಆರೋಪಿಸಿದರು.

"ದೇಶದ ಪ್ರತಿಯೊಂದು ಕುಟುಂಬವೂ ಅವರ ಭಕ್ತಿಗೆ ಅನುಗುಣವಾಗಿ ಕೊಡುಗೆ ನೀಡಿದೆ. ಪಿಲಿಭಿತ್‌ನ ಜನರು ಅಯೋಧ್ಯೆಗೆ ಬೃಹತ್ ಕೊಳಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ರಾಮಮಂದಿರ ನಿರ್ಮಾಣಕ್ಕೂ ಮುಂಚೆಯೇ ಭಾರತೀಯ ಮೈತ್ರಿಕೂಟದ ಜನರು ದ್ವೇಷವನ್ನು ಹೊಂದಿದ್ದರು ಮತ್ತು ಅವರು ಇಂದಿಗೂ ದ್ವೇಷವನ್ನು ಹೊಂದಿದ್ದಾರೆ" ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ