ಆರೋಗ್ಯ ಸಚಿವೆಗೆ ಕೋವಿಡ್ ರಾಣಿ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ

ಭಾನುವಾರ, 21 ಜೂನ್ 2020 (09:45 IST)
ಕೇರಳ ; ಕೇರಳದ ಆರೋಗ್ಯ ಸಚಿವೆಯನ್ನು ಕೋವಿಡ್ ರಾಣಿ ಎಂದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ಈ ಬಗ್ಗೆ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್, ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ಕೆಲವರು ಆಗ್ರಹಿಸಿದ್ದಾರೆ.


ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್, ನಾನು ಹೇಳಿದ್ದೆ ಸರಿ. ನಾನು ಯಾರಿಗೂ ಅವಮಾನ ಮಾಡಿಲ್ಲ. ಆದಕಾರಣ ನಾನು ಕ್ಷಮೆ ಕೇಳಲ್ಲ. ಕೆಲವು ವಿದೇಶಿ ಮಾದ್ಯಮಗಳು ಅವರನ್ನು ‘ರಾಕ್ ಸ್ಟಾರ್’, ‘ಕೊರೊನಾ ಕೊಂದವರು’ ಎಂದು ಹೊಗಳಿದ್ದಾರೆ. ಹಾಗೇಯೇ ನಾನು ಕೂಡ ರಾಣಿಗೆ ಹೋಲಿಸಿದ್ದೇನೆ ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ