ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಮಾತನಾಡಿ, ಕೋಝಿಕ್ಕೋಡ್ನಲ್ಲಿ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಅಕಸ್ಮಿಕ ತಿರುವು ಪಡೆದುಕೊಂಡು ಪಾಕ್ ಜನತೆಗೆ ಅಭಿವೃದ್ಧಿ ಕುರಿತಂತೆ ಉಪದೇಶ ಮಾಡಲು ಆರಂಭಿಸಿರುವುದು ದೇಶದ ಜನತೆಗೆ ಆಘಾತ ಮೂಡಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಕೋಝಿಕ್ಕೋಡ್ನಲ್ಲಿ ಆಯೋಜಿಸಲಾದ ಬಿಜೆಪಿ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಡತನ, ನಿರುದ್ಯೋಗದ ವಿರುದ್ಧ ಪಾಕಿಸ್ತಾನ ಯುದ್ಧ ಮಾಡಲಿ ಎಂದು ಸವಾಲ್ ಹಾಕಿದ್ದರು.