ಸೈಬರ್ ವಂಚನೆ: ಎಚ್ಚರ ಗ್ರಾಹಕರೇ... ಎಚ್ಚರ!

ಮಂಗಳವಾರ, 7 ಡಿಸೆಂಬರ್ 2021 (11:19 IST)
ನವದೆಹಲಿ : ಸೈಬರ್ ವಂಚನೆ ಮಾಡಿದ್ದ ಆರೋಪದ ಮೇಲೆ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ.
ಮೆಹಂದಿ ಹಸನ್ ಅಲಿಯಾಸ್ ಹರ್ಪಾಲ್ ಸಿಂಗ್ (43) ಮತ್ತು ಎಂಡಿ ಅರ್ಬಾಜ್ ಖಾನ್ (20) ಬಂಧಿತ ಆರೋಪಿಗಳು. ಇವರು ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅಂತರಾಜ್ಯ ಗುಂಪಿನ ಸದಸ್ಯರಾಗಿದ್ದರು. ಇತ್ತೀಚೆಗಷ್ಟೇ ಗುಂಪಿನ ಮಾಸ್ಟರ್ ಮೈಂಡ್ ಆಗಿದ್ದ ಆಫ್ರಿಕನ್ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ವಂಚಕರ ಗುಂಪು ಪ್ರತಿಷ್ಠಿತ ಕಂಪನಿಗಳನ್ನು ಗುರಿಯಾಗಿಸಿಕೊಂಡಿತ್ತು. ಕಂಪನಿಗಳ ಉನ್ನತ ಅಧಿಕಾರಿಗಳ ಇಮೇಲ್ನಂತೆ ಕಾಣುವ ರೀತಿ ನಕಲಿ ಮೇಲ್ಗಳನ್ನು ಕಳಿಸಿ ಜನರಿಗೆ ಮೊಸ ಮಾಡುತ್ತಿದ್ದರು. ಜೊತೆಗೆ ನಕಲಿ ಮೇಲ್ ಐಡಿಗಳನ್ನು ತಯಾರಿಸಿದ್ದರು. ಈ ರೀತಿ ಮಾಡಿ ಸುಮಾರು 80 ಲಕ್ಷ ರೂ. ವಂಚನೆಯನ್ನು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಆರೋಪಿಗಳು ಬ್ಯಾಂಕ್ಗೆ ನಕಲಿ ಚಾಲ್ತಿ ಖಾತೆಗಳಿಗೆ ಹಣ ವರ್ಗಾಯಿಸಲು ಸುಳ್ಳು ಪತ್ರವನ್ನು ನೀಡಿದ್ದಾರೆ. ಹಣವನ್ನು ಹಲವಾರು ಖಾತೆಗಳಿಗೆ ವರ್ಗಾಯಿಸಿ ಎಟಿಎಂನಿಂದ ಮತ್ತೆ ಹಿಂಪಡೆಯುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ