`5 ತಿಂಗಳಾದರೂ ನಿರ್ಭಯಾ ಕೇಸ್ ಅಪರಾಧಿಗಳಿಗೆ ಗಲ್ಲಿಗೇರಿಸಿಲಿಲ್ಲವೇಕೆ’

ಬುಧವಾರ, 1 ನವೆಂಬರ್ 2017 (17:00 IST)
ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಏಕೆ ಇನ್ನೂ ಗಲ್ಲಿಗೇರಿಸಿಲ್ಲ ಎಂದು ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಮೇ.5 ರಂದು ಸುಪ್ರೀಂಕೋರ್ಟ್ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ಎತ್ತಿಹಿಡಿದಿತ್ತು. ಆದರೆ ಇದಾಗಿ ಐದು ತಿಂಗಳು ಕಳೆದರೂ ಸಹ ಗಲ್ಲಿಗೇರಿಸದಿರುವುದೇಕೆ ಎಂದು ಕಾರಣ ಕೇಳಿ ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಜೈಲು ಅಧಿಕಾರಿಗಳಿಗೆ ಮಾತ್ರವಲ್ಲದೆ ಈ ವಿಚಾರದಲ್ಲಿ ದಕ್ಷಿಣ ದೆಹಲಿಯ ಡಿಸಿಪಿಗೆ ಸಹ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ನವೆಂಬರ್ 6ರೊಳಗೆ ನೋಟಿಸ್ ಗೆ ಉತ್ತರಿಸುವಂತೆ ಮಹಿಳಾ ಆಯೋಗ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ