ಜೀವ ಬೆದರಿಕೆ ಆರೋಪ: ಪೊಲೀಸ್ ಮೊರೆ ಹೋದ ಹನಿಪ್ರೀತ್ ಮಾಜಿ ಪತಿ

ಗುರುವಾರ, 28 ಸೆಪ್ಟಂಬರ್ 2017 (20:57 IST)
ಕರ್ನಾಲ್: ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ, ತಮಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಬರುತ್ತಿದ್ದು, ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಇತ್ತೀಚೆಗೆ ಸುದ್ದಿಹೋಷ್ಠಿ ನಡೆಸಿದ್ದ ಗುಪ್ತಾ, ಅಪರಾಧಿ, ಡೇರಾ ಮುಖ್ಯಸ್ಥ ರಾಮ್‌ ರಹೀಮ್‌ ಸಿಂಗ್‌ ಮತ್ತು ದತ್ತುಪುತ್ರಿ ಹನಿಪ್ರೀತ್‌ ನಡುವಿನ ಅಕ್ರಮ ಲೈಂಗಿಕ ಸಂಬಂಧಗಳನ್ನು ಬಹಿರಂಗಗೊಳಿಸಿದ್ದರು. ಇದಾದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರು ನೀಡಿದ್ದಾರೆ. ತನ್ನ ತಂದೆ ಮಹೇಂದ್ರ ಗುಪ್ತಾ ಜತೆ ಕರ್ನಾಲ್‌ ಪೊಲೀಸ್‌ ಠಾಣೆಗೆ ತೆರಳಿದ ಗುಪ್ತಾ, ತನಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಕರೆ ಬರುತ್ತಿವೆ. ಹೀಗಾಗಿ ತಮಗೆ ರಕ್ಷಣೆ ನೀಡಿ ಎಂದು ದೂರು ನೀಡಿದ್ದಾರೆ.

1991ರಲ್ಲಿ ಹನಿಪ್ರೀತ್‌-ವಿಶ್ವಾಸ್‌ ಗುಪ್ತಾ ಮದುವೆಯಾಗಿತ್ತು. ಆದರೆ ಗುರ್ಮಿತ್‌ ಮತ್ತು ಹನಿಪ್ರೀತ್‌ ನಡುವಿನ ಸಂಬಂಧ ತಂದೆ-ಮಗಳ ಸಂಬಂಧವಾಗಿರಲಿಲ್ಲ. ಆಕೆ ರಾಮ್ ರಹೀಮ್ ಜತೆ ಅನೈತಿಕ ಸಂಬಂಧವಿತ್ತು ಎಂದು ವಿಶ್ವಾಸ್ ಗುಪ್ತಾ ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ