ಮಗುವನ್ನು ದುಷ್ಟ ಶಕ್ತಿಗಳು ಆವರಿಸಿದೆ ಎಂದು ಕುಟುಂಬ ಸದಸ್ಯರು ಮಾಡಿದ್ದೇನು ಗೊತ್ತಾ?

ಬುಧವಾರ, 23 ಜನವರಿ 2019 (09:12 IST)
ಲಕ್ನೋ : ಮೂಢನಂಬಿಕೆಗೆ ಬೆಲೆಕೊಟ್ಟು ಆಗಷ್ಟೇ ಹುಟ್ಟಿದ ಎಳೆಕಂದಮ್ಮನನ್ನು ಕುಟುಂಬ ಸದಸ್ಯರುಗಳೇ ಸೇರಿ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. 


ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ದುಷ್ಟ ಶಕ್ತಿಗಳು ಆವರಿಸಿವೆ ಆದ್ದರಿಂದ ಅದನ್ನು ಕೆರೆಗೆ ಹಾಕಿ ಎಂದು ಸ್ವಯಂ ಘೋಷಿತ ದೇವಮಾನವರೊಬ್ಬರು  ಸಲಹೆ ನೀಡಿದ್ದಾರೆ. ಅವರ ಮಾತನ್ನು ನಂಬಿದ ಕುಟುಂಬದವರು ಮಗುವನ್ನು ಕೆರೆಗೆ ಬಿಸಾಕಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದ ಸ್ವಯಂ ಘೋಷಿತ ದೇವ ಮಾನವ, ಓರ್ವ ಮಹಿಳೆ, ಹಾಗೂ ಮಗುವಿನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ