ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ: ಬಿಜೆಪಿ ಮುಖಂಡ

ರಾಮಕೃಷ್ಣ ಪುರಾಣಿಕ

ಶನಿವಾರ, 3 ಫೆಬ್ರವರಿ 2018 (13:29 IST)
ಯುಪಿ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು ಪ್ರಸ್ತುತ ವಿತರಣೆಯ ಅಡಿಯಲ್ಲಿ ಭ್ರಷ್ಟಾಚಾರವು ಹೆಚ್ಚಾಗಿದೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.
ಆದಾಗ್ಯೂ, ಬಿಜೆಪಿ ವಕ್ತಾರರು, "ಅಗ್ಗದ ಪ್ರಚಾರವನ್ನು ಗಳಿಸುವ ಪ್ರಯತ್ನ" ಎಂದು ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ, ರಾಜ್‌ಭರ್ ಅವರು ಯಾವುದೇ ದೂರುಗಳನ್ನು ಹೊಂದಿದ್ದರೆ ಅವುಗಳನ್ನು ಅವರು ಸರಿಯಾದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಹೇಳಿದ್ದಾರೆ.
 
"ಹಿಂದಿನ ಎಸ್‌ಪಿ ಮತ್ತು ಬಿಎಸ್‌ಪಿ ಆಡಳಿತಗಳಿಗೆ ಹೋಲಿಸಿದರೆ ಬಿಜೆಪಿ ಆಡಳಿತದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ. ನಾನು ಈ ಸರ್ಕಾರದ ಭಾಗವಾಗಿದ್ದರೂ ಸಹ, ಇದು ನನ್ನ ಸರ್ಕಾರವಲ್ಲ... ಬಿಜೆಪಿಯೊಂದಿಗೆ ಮೈತ್ರಿ ಯಾಗಿದ್ದೇವೆ," ಎಂದು ರಾಜ್‌ಭರ್ ಹೇಳಿದ್ದಾರೆ.
 
ಬಿಜೆಪಿ ಮೈತ್ರಿಯ ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷವನ್ನು (ಎಸ್‌ಬಿಎಸ್‌ಪಿ) ಮುನ್ನಡೆಸುವ ರಾಜ್‌ಭರ್, ಪ್ರಸ್ತುತ ಸರ್ಕಾದಲ್ಲಿ ಅವರ ಪಕ್ಷವು ಕನಿಷ್ಠ ಗೌರವವನ್ನು ಪಡೆಯುತ್ತಿಲ್ಲ. "ಈ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯವರೊಂದಿಗೆ ನಾನು ಮಾತನಾಡಿದ್ದೇನೆ," ಎಂದು ಅವರು ಹೇಳಿದರು.
 
2019 ರ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷವು ಬಿಜೆಪಿಯೊಂದಿಗೆ ಸ್ಪರ್ಧೆ ಮಾಡುತ್ತದೆಯೇ ಎಂದು ಕೇಳಿದಾಗ, ರಾಜ್‌ಭರ್ ಅವರು ಅದು ಕೇಸರಿ ಪಕ್ಷದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
 
"ಅದು ನಮ್ಮೊಂದಿಗೆ ಮೈತ್ರಿ ಬಯಸುತ್ತದೆಯೇ ಅಥವಾ ಇಲ್ಲವೇ ಎಂಬುದು ಬಿಜೆಪಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ, ಸ್ಥಳೀಯ ಚುನಾವಣೆಗಳಂತೆ, ನಾವು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ," ಎಂದು ಅವರು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ