ನೌಕರನ ಬೆರಳನ್ನೇ ಕಚ್ಚಿ ತುಂಡರಿಸಿದ ಮಾಲಿಕ!

ಸೋಮವಾರ, 14 ಸೆಪ್ಟಂಬರ್ 2020 (10:19 IST)
ನವದೆಹಲಿ: ಕೆಲಸದ ವಿಚಾರಕ್ಕೆ ಪರಸ್ಪರ ಕಿತ್ತಾಡಿ ಕೊನೆಗೆ ಮಾಲಿಕ ನೌಕರನ ಕೈ ಬೆರಳನ್ನೇ ಕಚ್ಚಿ ತುಂಡರಿಸಿದ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.


ವಿಮೆ ಕಂಪನಿಯೊಂದರ ಮಾಲಿಕನಾಗಿದ್ದ ಹೇಮಂತ್ ಎಂಬಾತ ತನ್ನ ನೌಕರ ಮೋಹಿತ್ ನೊಂದಿಗೆ ಕಿತ್ತಾಡಿದ್ದಾನೆ. ಈ ಸಂದರ್ಭದಲ್ಲಿ ಆತ ಹೊಡೆಯಲೂ ಹೋಗಿದ್ದಾನೆ ಎನ್ನಲಾಗಿದೆ. ಹೊಡೆತದಿಂದ ತಪ್ಪಿಸಿಕೊಳ್ಳಲು ಮೋಹಿತ್ ಮುಖಕ್ಕೆ ಕೈ ಅಡ್ಡ ಹಿಡಿದಿದ್ದು, ಈ ವೇಳೆ ಆಕ್ರೋಶದಲ್ಲಿದ್ದ ಹೇಮಂತ್ ಆತನ ಬೆರಳನ್ನೇ ಕಚ್ಚಿ ತುಂಡರಿಸಿದ್ದಾನೆ. ಘಟನೆಯಾದ ತಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮೋಹಿತ್ ಪೊಲೀಸರಿಗೆ ದೂರು ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ