ಮೋದಿ ಕೊಲ್ಲ ಬರುತ್ತಿದ್ದಾರೆ, ರಕ್ಷಿಸಿ: ಕೇಜ್ರಿವಾಲ್ ಫೇಸ್‌ಬುಕ್ ವಾಲ್

ಶುಕ್ರವಾರ, 29 ಜುಲೈ 2016 (15:20 IST)
ಹತಾಶರಾಗಿರುವ ಮೋದಿ ನನ್ನನ್ನು ಕೊಲ್ಲ ಬಯಸಿದ್ದಾರೆ ಎಂದು ಎರಡು ದಿನಗಳ ಹಿಂದಷ್ಟೇ ಹೇಳಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತೆ ತಮ್ಮ ಮಾತುಗಳನ್ನು ಪುನರಾವರ್ತಿಸಿದ್ದಾರೆ. ಮೋದಿ ಅವರು ನನ್ನನ್ನು ಕೊಲ್ಲ ಬಯಸಿದ್ದಾರೆ. ನನ್ನನ್ನು ರಕ್ಷಿಸಿ ಎಂದು ಫೇಸ್‌ಬುಕ್ ವಾಲ್‌ನಲ್ಲಿ ಬರೆಯುವುದರ ಮೂಲಕ ಅವರು ಪೇಚಿಗೆ ಸಿಲುಕಿದ್ದಾರೆ.

ಕೆಲ ದಿನಗಳ ಹಿಂದೆ ಮೋದಿ ಅವರು ನನ್ನನ್ನು ಕಂಡು ಹೆದರುತ್ತಾರೆ ಎಂದ ತಾವು ಈಗ ಮೋದಿ ನನ್ನ ಕೊಲ್ಲ ಬಯಸಿದ್ದಾರೆ ಎನ್ನುತ್ತೀರಿ. ಒಟ್ಟಿನಲ್ಲಿ ನೀವು ಹೇಳ ಬಯಸುತ್ತಿರುವುದಾದರೂ ಏನು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ರೀತಿಯಲ್ಲಿ ಅನೇಕ ಕಮೆಂಟ್‌ಗಳು  ಬಂದಿದ್ದು ನೀವೇ ಓದಿ...

ವೆಬ್ದುನಿಯಾವನ್ನು ಓದಿ