ಕೋವಿಡ್ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂ ವಿಮೆ; ಮೋದಿ ಯೋಜನೆ ಜಾರಿ!

ಶುಕ್ರವಾರ, 6 ಆಗಸ್ಟ್ 2021 (08:09 IST)
ನವದೆಹಲಿ(ಆ.06):  ಕೊರೋನಾ ವೈರಸ್ ಕಾರಣ ಅನಾಥರಾಗಿರುವ ಮಕ್ಕಳಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯ ಘೋಷಿಸಿದೆ. ಇದೀಗ ಕೇಂದ್ರ ಈ ಹಿಂದೆ ಘೋಷಿಸಿದ ಯೋಜನೆಗಳು ಅನುಷ್ಠಾನಕ್ಕೆ ಬಂದಿದೆ. ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 18 ವರ್ಷದ ವರೆಗೆ ಉಚಿತ ವಿಮೆ ಯೋಜನೆ ಜಾರಿಗೆ ತಂದಿದೆ.

ಮೇ 29 ರಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಪಿಎಂ ಕೇರ್ಸ್ ಫಂಡ್ ವಿನಿಯೋಗಿಸುವ ಯೋಜನೆ ಘೋಷಿಸಿದ್ದರು. ಇದೀಗ ಮೋದಿ ಘೋಷಿಸಿದ್ದ ಯೋಜನೆಗಳು ಜಾರಿಗೆ ಬಂದಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕೋವಿಡ್ನಿಂದ ಪೋಷಕರ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂಪಾಯಿ ವಿಮೆ ನೀಡಲಿದೆ. ವಿಮೆಯ ಕಂತನ್ನು ಪಿಎಂ ಕೇರ್ಸ್ ಫಂಡ್ನಿಂದ ಭರಿಸಲಿದೆ. ಮಕ್ಕಳಿಗೆ 18 ವರ್ಷದ ವರೆಗೆ ಈ ವಿಮೆ ಇರಲಿದೆ. ಆಯುುಷ್ಮಾನ್ ಭಾರತ್ ಯೋಜನೆಯಡಿ ಮಕ್ಕಳಿಗೆ ವಿಮೆ ಸೌಲಭ್ಯ ನೀಡಲಿದೆ. ಈ ಮೂಲಕ ಮಕ್ಕಳಿಗೆ ಸುರಕ್ಷಿತ ವಿಮೆಯನ್ನು ಸರ್ಕಾರವೇ ನೀಡಲಿದೆ.
ಇನ್ನು ಈ ಮಕ್ಕಳ ಶಿಕ್ಷಣಕ್ಕೆ ವಿಶೇಷ ಯೋಜನೆ ಘೋಷಿಸಲಾಗಿದೆ. 18 ವರ್ಷದ ವರೆಗೆ ಇದೇ ಮಕ್ಕಳಿಗೆ ಪ್ರತಿ ತಿಂಗಳು ಪರಿಹಾರ ಹಣ ನೀಡಲಾಗುತ್ತದೆ. ಇನ್ನು 23 ವರ್ಷದ ಬಳಿಕ 10 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳು ಜಾರಿಗೆ ಬಂದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ