ಪೊಲೀಸ್ ಮೂಲಗಳ ಪ್ರಕಾರ, ಗುರುವಾರದಂದು ಸಂಜೆ ಯುವತಿ ತನ್ನ ಮನೆಯ ಶೆಡ್ನಲ್ಲಿ ಸ್ನಾನ ಮಾಡುತ್ತಿರುವಾಗ ಹದಿಹರೆಯದ ಯುವಕ ಕದ್ದು ನೋಡುತ್ತಿದ್ದಾನೆ ಎನ್ನುವುದು ಗಮನಕ್ಕೆ ಬಂದಿದೆ. ಆಕೆ ಜೋರಾಗಿ ಕೂಗಿದಾಗ ಮನೆಯೊಳಗಿದ್ದ ಚಿಕ್ಕಪ್ಪ ಹೊರಬಂದು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಮೋಹನ್ ಶರ್ಮಾ ತಿಳಿಸಿದ್ದಾರೆ.
ಆರಂಭದಲ್ಲಿ ಯುವತಿ ಕುಟುಂಬದವರು ಆರೋಪಿಗೆ ಬುದ್ದಿಹೇಳುವಂತೆ ಆತನ ಕುಟುಂಬದವರಿಗೆ ಸಲಹೆ ನೀಡಿದ್ದಾರೆ. ಆದರೆ, ತಮ್ಮ ಪುತ್ರನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುವ ಕೋಪದಿಂದ ಆರೋಪಿಯ ತಂದೆ ಮತ್ತು ಅವರ ಮತ್ತೊಬ್ಬ ಸಂಬಂಧಿ ಸೇರಿ ಯುವತಿಯ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.