ರಾಷ್ಟ್ರಪತಿ ಚುನಾವಣೆ ನಂತರ ರಾಜೀನಾಮೆ ನೀಡಲಿರುವ ಗೋವಾ, ಯುಪಿ ಸಿಎಂ!
ಸಿಎಂ ಆಗಿದ್ದರೂ, ಇವರಿಬ್ಬರೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಆರು ತಿಂಗಳ ಕಾಲಾವಕಾಶವಿದೆ. ರಾಷ್ಟ್ರಪತಿ ಚುನಾವಣೆ ನಡೆಯಲಿರುವುದು ಜುಲೈನಲ್ಲಿ. ಹೀಗಾಗಿ ಇವರಿಬ್ಬರೂ ಈ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ.
ಇಬ್ಬರು ಸಿಎಂ ಜತೆಗೆ ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ತಮ್ಮ ಸಂಸದ ಸ್ಥಾನಕ್ಕೆ ಚುನಾವಣೆ ನಂತರ ರಾಜೀನಾಮೆ ನೀಡಲಿದ್ದಾರೆ.