ದೇಶದ್ರೋಹ ಕೇಸ್: ಹಾರ್ದಿಕ್ ಪಟೇಲ್‌ಗೆ ಜಾಮೀನು ಮಂಜೂರು

ಶುಕ್ರವಾರ, 8 ಜುಲೈ 2016 (16:20 IST)
ದೇಶದ್ರೋಹ ಪ್ರಕರಣದಲ್ಲಿ ಆರೋಪಿಯಾಗಿದ್ದ ಪಟೇಲ್ ಹೋರಾಟ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್‌ಗೆ ಗುಜರಾತ್ ಹೈಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.
 
ಗುಜರಾತ್‌ನಿಂದ ಆರು ತಿಂಗಳುಗಳ ಕಾಲ ಹೊರಗಿರಬೇಕು ಎನ್ನುವ ಷರತ್ತಿನೊಂದಿಗೆ ಕೋರ್ಟ್ ಹಾರ್ದಿಕ್ ಪಟೇಲ್‌ಗೆ ಜಾಮೀನು ನೀಡಿದೆ. ಆದರೆ, ಪಟೇಲ್ ವಿರುದ್ಧ ಮತ್ತೊಂದು ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಜೈಲುವಾಸದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಹಾರ್ದಿಕ್ ಪಟೇಲ್ ಪರ ವಕೀಲ ಝುಬಿನ್ ಭಾರ್ದಾ ತಿಳಿಸಿದ್ದಾರೆ.
 
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪಟೇಲ್ ಇನಾಮತ್ ಅಂದೋಲನ್ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್‌ರನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿತ್ತು.
  
ನಿನ್ನೆಯವರೆಗೆ ಗುಜರಾತ್ ಸರಕಾರ ಹಾರ್ದಿಕ್ ಪಟೇಲ್‌ರನ್ನು ಬಿಡುಗಡೆಗೊಳಿಸಿದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತುಂಬಾ ಕಷ್ಟವಾಗುತ್ತದೆ ಎಂದು ಕೋರ್ಟ್‌ಗೆ ನಿರಂತರವಾಗಿ ಮನವಿ ಮಾಡಿತ್ತು. ಆದರೆ, ಕೋರ್ಟ್ ಇಂದು ರಾಜ್ಯ ಸರಕಾರದ ಮನವಿಯನ್ನು ತಿರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.
 
ಒಂದು ವೇಳೆ ಕೋರ್ಟ್ ನಿರ್ದೇಶನ ನೀಡಿದಲ್ಲಿ ಜಾಮೀನು ಅವಧಿಯವರೆಗೆ ಹಾರ್ದಿಕ್ ರಾಜ್ಯದಿಂದ ಹೊರಗಿರಲು ಸಿದ್ದವಾಗಿದ್ದಾರೆ. ಪಟೇಲ್ ಮೀಸಲಾತಿ ಹೋರಾಟವನ್ನು ಶಾಂತಿಪೂರ್ವಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ಪಟೇಲ್ ಅನಾಮತ್ ಸಮಿತಿ ಕೋರ್ಟ್‌ಗೆ  ನಿರಂತರವಾಗಿ ಮನವಿ ಮಾಡಿದ್ದರೂ ಜಾಮೀನು ದೊರೆತಿರಲಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ