ಹಿಜಬ್ : ಮೌನ ಮುರಿದ ಅಮಿತ್ ಶಾ

ಮಂಗಳವಾರ, 22 ಫೆಬ್ರವರಿ 2022 (08:20 IST)
ನವದೆಹಲಿ : ಕನಾಟಕದಲ್ಲಿ ಪ್ರಾರಂಭವಾದ ಹಿಜಬ್ ವಿವಾದ ದೇಶವ್ಯಾಪಿ ಹರಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಣ್ಣಗಾಗುವಂತೆ ಕಾಣಿಸುತ್ತಿಲ್ಲ.

ಹಿಜಬ್ ಬಗೆಗಿನ ಗಲಬೆ ಪ್ರಾರಂಭವಾಗಿ ತಿಂಗಳು ಮೇಲಾಗಿದೆ. ಇಲ್ಲಿಯ ವರೆಗೂ ಹಿಜಬ್ ವಿಚಾರವಾಗಿ ಎಲ್ಲಿಯೂ ಮಾತನಾಡಿರದ ಕೇಂದ್ರ ಸಚಿವ ಅಮಿತ್ ಶಾ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಎಲ್ಲಾ ಧರ್ಮದವರೂ ಶಾಲಾ-ಕಾಲೇಜಿನ ಸಮವಸ್ತ್ರ ಪಾಲಿಸಬೇಕು. ಸದ್ಯ ಹಿಜಬ್ ವಿವಾದ ಕೋರ್ಟ್ನಲ್ಲಿದ್ದು, ವಿಚಾರಣೆ ನಡಿಯುತ್ತಿದೆ. ಕೋರ್ಟ್ ಏನೇ ತೀರ್ಪು ನೀಡಿದರೂ ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ