ವರದಕ್ಷಿಣೆಗಾಗಿ ಪೀಡಿಸಿದ ಪತಿ ಪತ್ನಿಗೆ ಮಾಡಿದ್ದೇನು ಗೊತ್ತಾ?

ಮಂಗಳವಾರ, 20 ನವೆಂಬರ್ 2018 (11:12 IST)
ಕಾನ್ಪುರ: ವರದಕ್ಷಿಣೆಗಾಗಿ ಪೀಡಿಸಿದ ಪತಿ ಪತ್ನಿಯ ನಾಲಿಗೆ ಕಟ್ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯವೆಸಗಿದ  ಬಳಿಕ 10 ದಿನಗಳ ಕಾಲ ಆಕೆಯನ್ನು ಕೂಡಿ ಹಾಕಿದ್ದಾನೆ.

ಆರೋಪಿ ಪತಿ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರ ಪುತ್ರ ಎನ್ನಲಾಗಿದ್ದು, ಈತನನ್ನು ಈಗ ಬಂಧಿಸಲಾಗಿದೆ. ಪತ್ನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

ವರದಕ್ಷಿಣೆ ಸಂಬಂಧವಾಗಿ ಇಬ್ಬರ ನಡುವೆ ವಾಗ್ವಾದ ನಡೆದು ಆ ಸಂದರ್ಭದಲ್ಲಿ ಪತಿ ಆಕಾಶ್ ತನ್ನ ನಾಲಿಕೆ ಕತ್ತರಿಸಿದ್ದ. ಬಳಿಕ ಇದಕ್ಕೆ ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ 10 ದಿನ ಮನೆಯಲ್ಲಿ ಕೂಡಿ ಹಾಕಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ