'ಗುಜರಾತಿ ಭಾಷೆ ಮಾತನಾಡದಿದ್ದರೂ, ಹೃದಯದಿಂದ ನಾನು ಗುಜರಾತಿ', ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿಕೊಂಡಿದ್ದಾರೆ. ಎರಡು ದಿನಗಳ ಮಟ್ಟಿಗೆ ಗುಜರಾತ್ ಪ್ರವಾಸದಲ್ಲಿರುವ ಮುಖರ್ಜಿ, ಈ ಹಿಂದೆ ನಾನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ನಾನು ಗುಜರಾತಿಗೆ ಹೊಸಬನಲ್ಲ. ಅವರು ( ರಾಜಕೀಯ ನಾಯಕರು) ನನ್ನನ್ನು ಈ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಸಹಾಯ ಮಾಡಿದರು. ನಾನು ಸಂಪೂರ್ಣ 6 ವರ್ಷ ರಾಜ್ಯಸಭೆಯಲ್ಲಿ ಗುಜರಾತ್ನನ್ನು ಪ್ರತಿನಿಧಿಸಿದ್ದೆ. ಹೀಗಾಗಿ ನಾನು ಗುಜರಾತಿ ಎಂದು ವಾದಿಸಬಲ್ಲೆ. ಆದರೆ ದುರದೃಷ್ಟವಶಾತ್ ನನಗೆ ಗುಜರಾತಿ ಮಾತನಾಡಲು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಣವ್ ಮುಖರ್ಜಿ.
ಎಂದಿದ್ದಾರೆ.
ಭಾರತದ ಇಬ್ಬರು ಮಹಾನ್ ಪುತ್ರರಾದ ಗಾಂಧಿ ಮತ್ತು ಪಟೇಲ್, ಸ್ವಾತಂತ್ರ್ಯ ತಂದು ಕೊಟ್ಟಿದ್ದಷ್ಟೇ ಅಲ್ಲ, ದೇಶದ ಭವ್ಯ ಭವಿಷ್ಯಕ್ಕೆ ಭದ್ರ ನೆಲಗಟ್ಟನ್ನು ಕೂಡ ಹಾಕಿದರು ಎಂದು ರಾಷ್ಟ್ರಪತಿ ಹೇಳಿದ್ದಾರೆ.