ಕೈಯಲ್ಲಿ ಖಡ್ಗ ಹಿಡಿದು, ಕಾಂಗ್ರೆಸ್ ವಿರುದ್ಧ ಮಾತಿನ ಚಾಟಿ ಬೀಸಿದ ಕಂಗನಾ ರಣಾವತ್

Sampriya

ಶನಿವಾರ, 13 ಏಪ್ರಿಲ್ 2024 (18:11 IST)
Photo Courtesy X
ಮಂಡಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಂಡಿ ಲೋಕಸಭಾ ಕ್ಷೇತ್ರದ ನಾಯಕಿ ಕಂಗನಾ ರಣಾವತ್ ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯದಲ್ಲಿ ಆಡಳಿತ ಪಕ್ಷವು ಜನರನ್ನು "ಲೂಟಿ" ಮಾಡುತ್ತಿದೆ ಮತ್ತು "ಸುಳ್ಳು ಆಮಿಷಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿದರು.

ಮಂಡಿ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಣಾವತ್ ಅವರು, "ಕಾಂಗ್ರೆಸ್ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟು ಬೇರೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

"ನಾವು ನಮ್ಮ ಹಿಮಾಚಲದ ಜನರನ್ನು ಎಚ್ಚರಗೊಳಿಸಬೇಕು ಮತ್ತು ಕಾಂಗ್ರೆಸ್‌ನ ಸುಳ್ಳು ಭರವಸೆಗಳ ವಿರುದ್ಧ ಅವರನ್ನು ರಕ್ಷಿಸಬೇಕು. ಈ ಸುಳ್ಳು ಭರವಸೆಗಳ ಬಲೆಗೆ ಬೀಳಬೇಡಿ. ನಾವು ಪ್ರಧಾನಿ ನರೇಂದ್ರ ಮೋದಿ ಅವರ 'ಹೊಸ ಭಾರತ' ಕಲ್ಪನೆಯೊಂದಿಗೆ ಮುನ್ನಡೆಯಬೇಕೆಂದರು.

ಕಚ್ಚತೀವು ದ್ವೀಪದಲ್ಲಿ "ಅಲ್ಲಿ ಯಾರು ವಾಸಿಸುತ್ತಾರೆ" ಎಂಬ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್, ಇಂತಹ ಮನಸ್ಥಿತಿ ಹೊಂದಿರುವ ಪಕ್ಷಗಳಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ