ಹರಿಯಾಣದಲ್ಲಿ ಜೆಜೆಪಿ ನಾಯಕ ರವೀಂದರ್‌ರನ್ನು ಗುಂಡಿಕ್ಕಿ ಹತ್ಯೆ

Sampriya

ಶನಿವಾರ, 22 ಮಾರ್ಚ್ 2025 (15:35 IST)
Photo Courtesy X
ಪಾಣಿಪತ್ (ಹರಿಯಾಣ): ಜೆಜೆಪಿ ನಾಯಕ ರವೀಂದರ್ ಮಿನ್ನಾ ಅವರನ್ನು ಶುಕ್ರವಾರ ಸಂಜೆ ಪಾಣಿಪತ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಆರೋಪಿ ಮಿನ್ನಾ ಅವರ ಸೋದರಸಂಬಂಧಿ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲು ದಾಳಿ ಮಾಡಿದ್ದು, ಅವರು ಗಾಯಗಳೊಂಡದಿಗೆ ಪಾರಾಗಿದ್ದಾರೆ.

ದಾಳಿಕೋರನು ತನ್ನ ಸೋದರಸಂಬಂಧಿ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾನೆ, ಇಬ್ಬರೂ ಗಾಯಗೊಂಡಿದ್ದಾರೆ.

"ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ರವೀಂದರ್ ಮಿನ್ನಾ ಅವರನ್ನು ಶುಕ್ರವಾರ ಸಂಜೆ ತಡರಾತ್ರಿ ಪಾಣಿಪತ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ದಾಳಿಕೋರನು ಜೆಜೆಪಿ ನಾಯಕನ ಮೇಲೆ ಮತ್ತು ಅವನ ಸೋದರಸಂಬಂಧಿ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೆಯೂ ಗುಂಡು ಹಾರಿಸಿದ್ದಾನೆ. ಇಬ್ಬರೂ ಗಾಯಗೊಂಡಿದ್ದಾರೆ, ಆದರೆ ಜೆಜೆಪಿ ನಾಯಕ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಬಂಧಿಸಲು 5 ತಂಡಗಳನ್ನು ರಚಿಸಲಾಗಿದೆ" ಎಂದು ಪಾಣಿಪತ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಸುರೇಂದ್ರ ಜವಾಹರ ಎಂಬ ಬಿಜೆಪಿ ನಾಯಕನನ್ನು ಮಾರ್ಚ್ 14 ರಂದು ಸೋನಿಪತ್‌ನಲ್ಲಿ ಭೂ ವಿವಾದದ ಕಾರಣ ಅವರ ನೆರೆಹೊರೆಯವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸೋನಿಪತ್ ಪೊಲೀಸರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ