ಕರ್ನಾಟಕದ ಜಾನಪದ ಕ್ರೀಡೆ ಕಂಬಳಕ್ಕೆ ಇನ್ಯಾರೂ ತಗಾದೆ ತೆಗೆಯುವಂತಿಲ್ಲ!

ಸೋಮವಾರ, 12 ಮಾರ್ಚ್ 2018 (11:59 IST)
ನವದೆಹಲಿ: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ದೊರಕಿದ್ದು, ಈ ಜಾನಪದ ಕ್ರೀಡೆಗೆ ಪ್ರಾಣಿ ಹಿಂಸೆ ನೆಪದಲ್ಲಿ ಇನ್ಯಾರೂ ತಗಾದೆ ತೆಗೆಯುವಂತಿಲ್ಲ.

ಪ್ರಾಣಿ ದಯಾ ಸಂಘ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ಹಿಂಸೆ ನೆಪದಲ್ಲಿ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ತಡೆ ಒಡ್ಡಬೇಕೆಂದು ಅರ್ಜಿ ಸಲ್ಲಿಸಿತ್ತು.

ಇದೀಗ ಕಂಬಳ ಸೇರಿದಂತೆ ಕೆಲವು ಜಾನಪದ ಕ್ರೀಡೆಗಳಿಗೆ ಕಾನೂನಿನ ಮಾನ್ಯತೆ ನೀಡುವ ಮಸೂದೆಯನ್ನು  ರಾಷ್ಟ್ರಪತಿಗಳ ಮುದ್ರೆಗೆ ನೀಡಲಾಗಿತ್ತು. ಅದಕ್ಕೀಗ ರಾಷ್ಟ್ರಪತಿಗಳಿಂದಲೂ ಮುದ್ರೆ ಸಿಕ್ಕಿದೆ. ಹೀಗಾಗಿ ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ