Kasargodu: ಬಾಲ್ಯದ ಘಟನೆಗೆ 50 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡ ವ್ಯಕ್ತಿ

Sampriya

ಬುಧವಾರ, 11 ಜೂನ್ 2025 (16:13 IST)
Photo Courtesy X
ಕಾಸರಗೋಡು: ಬಾಲ್ಯದಲ್ಲಿ ಶಾಲೆಯಲ್ಲಿ ನಡೆದ ಜಗಳಕ್ಕೆ 50 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. 

ಬಾಲ್ಯದಲ್ಲಿ ಇಬ್ಬರು ಸಹಪಾಠಿಗಳು ಜಗಳವಾಡಿದ್ದಾರೆ. ಅದೇ ಕೋಪದಲ್ಲಿ 50ವರ್ಷಗಳ ಬಳಿಕ  ಗಂಭೀರವಾಗಿ ದಾಳಿ ಮಾಡಿದ್ದಾನೆ. ಇದರಿಂದ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಜಗಳವಾಡಿದವರನ್ನು ಬಾಲಕೃಷ್ಣನ್ ಮತ್ತು ವಿಜೆ ಬಾಬು ಎಂದು ಗುರುತಿಸಲಾಗಿದೆ. 

ಪೊಲೀಸರ ಪ್ರಕಾರ, ಬಾಲಕೃಷ್ಣನ್ ಮತ್ತು ಬಾಬು 4 ನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರು, ಈ ವೇಳೆ ಘಟನೆಯೊಂದಕ್ಕೆ ಕೈ ಕೈ ಮೀಲಾಯಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಬು ಎಂಬಾತ ಬಾಲಕೃಷ್ಣನ್ ಅವರನ್ನು ಹೊಡೆದಿದ್ದಾರೆ ಎನ್ನಲಾಗಿದೆ. ಇದು ಶಾಲೆಯ ಅಂಗಳದಲ್ಲಿ ನಡೆದ ಸಣ್ಣ ಜಗಳದಂತೆ ತೋರುತ್ತಿದ್ದರೂ, ಅದು ಬಾಲಕೃಷ್ಣನ್ ಮೇಲೆ ಶಾಶ್ವತ ಪರಿಣಾಮ ಬೀರಿತು, ಅವರು ದಶಕಗಳಿಂದ ದ್ವೇಷವನ್ನು ಹೊಂದಿದ್ದರು ಎಂದು ತೋರುತ್ತದೆ.

ಇತ್ತೀಚೆಗೆ, ಇಬ್ಬರೂ ಶಾಲೆಯ ಪುನರ್ಮಿಲನ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಲ್ಲಿ ಹಳೆಯ ಜಗಳವು ಮತ್ತೇ ಶುರುವಾಗಿತ್ತು. ಸ್ನೇಹಿತರ ಮಧ್ಯಸ್ಥಿಕೆಯಿಂದ ರಾಜಿ ಸಂಧಾನವಾಯಿತು. 

ಆದರೆ ಮತ್ತೇ ಸ್ನೇಹಿತನ ಮನೆಯಲ್ಲಿನ ಭೇಟಿ ಸಂದರ್ಭದಲ್ಲಿ ಅದೇ ಕೋಪ ಅತೀರೇಕಕ್ಕೆ ತಿರುಗಿದೆ.  ಜೂನ್ 2 ರಂದು, ಬಾಲಕೃಷ್ಣನ್ ತನ್ನ ಸ್ನೇಹಿತ ಮ್ಯಾಥ್ಯೂ ಜೊತೆ ಬಾಬು ಮನೆಗೆ ಹೋದರು. ಅಲ್ಲಿ, ಬಾಲಕೃಷ್ಣನ್ ಬಾಬು ಅವರನ್ನು "4 ನೇ ತರಗತಿಯಲ್ಲಿ ನೀವು ನನ್ನನ್ನು ಏಕೆ ಹೊಡೆದಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದಾರೆ.

ಸಂಭಾಷಣೆ ದೈಹಿಕವಾಗಿ ಬದಲಾಗುತ್ತಿದ್ದಂತೆ, ಬಾಬು, ಬಾಲಕೃಷ್ಣನ್ ಅವರ ಶರ್ಟ್ ಹಿಡಿದು ಹಿಡಿದರು ಎಂದು ವರದಿಯಾಗಿದೆ. ಆ ಕ್ಷಣದಲ್ಲಿ, ಮ್ಯಾಥ್ಯೂ ಬಾಬು ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಅವರ ಮುಖ ಮತ್ತು ಬೆನ್ನಿಗೆ ಹೊಡೆದರು. ನಂತರ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು. 

ಪೊಲೀಸ್ ತನಿಖೆ ಪ್ರಗತಿಯಲ್ಲಿದೆ

ಬಾಬು ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಇಬ್ಬರೂ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ