ಶಸ್ತ್ರಚಿಕಿತ್ಸೆ: ಕೇಜ್ರಿವಾಲ್ ಅವರ ಬಾಯಿಗಿಂತ ಗಂಟಲು ದೊಡ್ಡದಂತೆ..!

ಗುರುವಾರ, 15 ಸೆಪ್ಟಂಬರ್ 2016 (14:45 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಗರದ ನಾರಾಯಾಣ ಹೆಲ್ತ್ ಸಿಟಿಯಲ್ಲಿ ಗಂಟಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅವರ ಬಾಯಿಗಿಂತ ಗಂಟಲು ದೊಡ್ಡದಾಗಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ನಾಲ್ಕು ದಶಕಗಳಿಂದ ಗಂಟಲು ನೋವಿನ ತೊಂದರೆ ಎದುರಿಸುತ್ತಿದ್ದ ಕೇಜ್ರಿವಾಲ್ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಶಸ್ತ್ರಚಿಕಿತ್ಸೆಯ ನಂತರ ಕೇಜ್ರಿವಾಲ್ ಸುಮಾರು 15 ದಿನಗಳ ಕಾಲ ಮಾತನಾಡಬಾರದು ಎಂದು ಸಲಹೆ ನೀಡಿರುವ ವೈದ್ಯರು ತದನಂತರ ಆರೋಗ್ಯವನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದು ತಮ್ಮ ನಾಯಕನ ಯೋಗಕ್ಷೇಮದ ಬಗ್ಗೆ ಕಳವಳಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ