ಹಾವಿನ ಜೊತೆ ಸರಸವಾಡಲು ಹೋಗಿ ಪ್ರಾಣವನ್ನೇ ಬಿಟ್ಟ..!

ಮಂಗಳವಾರ, 11 ಏಪ್ರಿಲ್ 2017 (14:46 IST)
ವಿಡಿಯೋ ಮಾಡಲು ಹಾವನ್ನ ಕುತ್ತಿಗೆಗೆ ಏರಿಸಿಕೊಂಡ ವ್ಯಕ್ತಿ ಹಾವು ಕಚ್ಚಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೋಧಪುರದಲ್ಲಿ ಜಿಲ್ಲೆಯ ಲೋಹಾವತ್`ನಿಂದ ವರದಿಯಾಗಿದೆ. ಮೃತ ವ್ಯಕ್ತಿಯನ್ನ ಬಾಬುರಾಮ್ ಜಖಾರ್ಸ್ ಎಂದು ಗುರ್ತಿಸಲಾಗಿದೆ.

ಧಾರ್ಮಿಕ ಆಚರಣೆಯ ಭಾಗವಾಗಿ ಹಾವಾಡಿಗ ವಿಷ ಸರ್ಪವನ್ನ ಾಡಿಸುತ್ತಿದ್ದ. ಈ ಸಂದರ್ಭ ಸರ್ಪವನ್ನ ಬಾಬುರಾಮ್ ಕುತ್ತಿಗೆಗೆ ಸುತ್ತಿದ್ದಾನೆ. ಈ ಸಂದರ್ಭ ಹಾವು ಬಾಬುರಾಮ್`ಗೆ ಕಚ್ಚಿದೆ. ಆದರೂ ಏನೂ ಆಗಿಲ್ಲವೆಂಬಂತೆ ಸುಮ್ಮನಾಗಿದ್ದಾನೆ. ಬಾಬುರಾಮ್ ಅಸ್ವಸ್ಥನಾಗುತ್ತಲೇ ವಿಷ ತೆಗೆಯಲು ಮಂತ್ರವಾದಿಯ ಬಳಿ ಕರೆದೊಯ್ದಿದ್ದಾನೆ. ಆದರೂ ಸುಧಾರಿಸದಿದ್ದಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬಾಬೂರಾಮ್ ದಾರಿ ಮಧ್ಯೆಯೇ ಬಾಬೂರಾಮ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಐಪಿಸಿ ಸೆಕ್ಷನ್ 304ರಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಹಾವತ್ ಪೊಲೀಸರು ಹಾವಾಡಿಗನಾಗಿ ಬಲೆ ಬೀಸಿದ್ದಾರೆ. ಹಾವಿನ ಜೊತೆ ಬಾಬೂರಾಮ್ ಸರಸದ ವಿಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ