ಮಕ್ಕಳ ವಿಚಾರಕ್ಕೆ ನಡೆಯಿತು ಕೊಲೆ

ಭಾನುವಾರ, 23 ಮೇ 2021 (09:38 IST)
ಚಂಡೀಗಢ್ : ಮಕ್ಕಳ ವಿಚಾರಕ್ಕೆ  30 ವರ್ಷದ ಮಹಿಳೆಯನ್ನು  ಆಕೆಯ ಗಂಡನ ಸಹೋದರ  ಹೊಡೆದು ಕೊಂದ ಘಟನೆ ಹರಿಯಾಣದ ಅಂಬಾಲಾ ನಗರದಲ್ಲಿ ನಡೆದಿದೆ.

ಸಂತ್ರಸ್ತೆ ಹಾಗೂ ಆಕೆಯ ಗಂಡನ ಸಹೋದರನ ಪತ್ನಿಯ ನಡುವೆ ಮಕ್ಕಳ ವಿಚಾರಕ್ಕೆ ಜಗಳವಾಗುತ್ತಿತ್ತು. ಆಗ ಮಧ್ಯೆ ಬಂದ ಸಂತ್ರಸ್ತೆಯ ಪತಿಯ ಸಹೋದರ ಅವಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದದ್ದಾಳೆ. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು  ಹೋದಾಗ ಆಕೆ ಸತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಸಂತ್ರಸ್ತೆಯ ಪತಿ ತನ್ನ ತಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ  ಹಿನ್ನಲೆಯಲ್ಲಿ  ಆರೋಪಿ ಹಾಗೂ ಆತನ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ