ಐಸಿಸ್ ಸೇರಿದ್ದ ಕೇರಳದ ಮತ್ತೊಬ್ಬ ಯುವಕನ ಹತ್ಯೆ: ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಬಂತು ವಾಟ್ಸ್ ಆಪ್ ಮೆಸೆಜ್

ಮಂಗಳವಾರ, 20 ಜೂನ್ 2017 (17:24 IST)
ತಿರುವನಂತಪುರಂ:ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿರುವುದಾಗಿ ಶಂಕಿಸಲಾಗಿರುವ ಕೇರಳದ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 
 
ಕಾಸರಗೋಡಿನ ಶಾಜೀರ್ ಎಂ ಅಬ್ದುಲ್ಲಾ ಎಂಬ ಯುವಕನ ಮೃತದೇಹದ ಫೋಟೋಗಳನ್ನು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಬಿಸಿ ಅಬ್ದುಲ್ ರೆಹಮಾನ್ ಎಂಬವರ ವಾಟ್ಸ್ ಆಪ್ ಗೆ ಬಂದಿರುವುದಾಗಿ ತಿಳಿದುಬಂದಿದೆ. ಈ ಮೂಲಕ 2016ರ ಜೂನ್ ನಲ್ಲಿ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿಯಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದಂತಾಗಿದೆ.
 
ಫೋಟೋ ಮತ್ತು ಮಾಹಿತಿಯ ಸಂದೇಶವನ್ನು ತನಗೆ ಕಾಸರಗೋಡಿನ ಮತ್ತೊಬ್ಬ ವ್ಯಕ್ತಿ ಫಾರ್ವರ್ಡ್ ಮಾಡಿರುವುದಾಗಿ ರೆಹಮಾನ್ ತಿಳಿಸಿದ್ದು, ಮೃತ ಯುವಕ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿರಬೇಕೆಂದು ಶಂಕಿಸಲಾಗಿತ್ತು. ಶಾಜೀರ್ ಎಂ ಅಬ್ದುಲ್ಲಾ ಬಗ್ಗೆ ನನಗೆ ಬೇರೆ ಯಾವುದೇ ಮಾಹಿತಿ ಗೊತ್ತಿಲ್ಲ. ಆತ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ಸಂದೇಶದಲ್ಲಿ ತಿಳಿಸಿರುವುದಾಗಿ ರೆಹಮಾನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ