2011ರಲ್ಲಿ ಭಾರತೀಯ ಸೇನೆಯ ಸೀಮಿತ ದಾಳಿ ನಡೆದಿತ್ತು: ಹಿಂದೂ ಪತ್ರಿಕೆ

ಭಾನುವಾರ, 9 ಅಕ್ಟೋಬರ್ 2016 (16:29 IST)
ಭಾರತೀಯ ಸೇನೆ ಹಿಂದೆ ಕೂಡಾ ಹಲವಾರು ಬಾರಿ ಸೀಮಿತ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದರೂ ಬಿಜೆಪಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಇದೀಗ ಹಿಂದೂ ಪತ್ರಿಕೆ ಹಿಂದೆ ನಡೆದ ಭಾರತೀಯ ಸೇನೆಯ ಸೀಮಿತ ದಾಳಿ ಕುರಿತಂತೆ ಬೆಳಕು ಚೆಲ್ಲಿದೆ. 
 
ಇದೀಗ ಹಿಂದೂ ವರದಿಯ ಪ್ರಕಾರ, ಕಳೆದ 2011ರಲ್ಲಿ ಕುಪ್ವಾರಾದ ಗುಗಲ್‌ಧರ್ ಸೇನಾ ಕೇಂದ್ರದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ ಆರು ಸೈನಿಕರನ್ನು ಹತ್ಯೆ ಮಾಡಿ, ಇಬ್ಬರು ಸೈನಿಕರ ರುಂಡವನ್ನು ಭಾರತಕ್ಕೆ ರವಾನಿಸಿ ತನ್ನ ಹೇಯ ಕೃತ್ಯ ತೋರಿಸಿತ್ತು. ಪಾಕಿಸ್ತಾನದ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ಸೀಮಿತ ದಾಳಿ ನಡೆಸಿತ್ತು ಎಂದು ವರದಿ ಮಾಡಿದೆ.
 
ಪಾಕಿಸ್ತಾನದ ಕೃತ್ಯಕ್ಕೆ ತಿರುಗೇಟು ನೀಡಲು ಭಾರತೀಯ ಸೇನೆ ಆಪರೇಶನ್ ಜಿಂಜರ್ ಎನ್ನುವ ಸೀಮಿತ ದಾಳಿ ನಡೆಸಿತ್ತು. ಪಾಕಿಸ್ತಾನದೊಳಗೆ ನುಗ್ಗಿ ಮೂರು ಸೇನೆ ಕೇಂದ್ರಗಳ ಮೇಲೆ ದಾಳಿ ಮಾಡಿ 14 ಪಾಕ್ ಸೈನಿಕರನ್ನು ಹತ್ಯೆಗೈದಿತ್ತು.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ