ಸನಾತನ ಧರ್ಮ ನಾಶ ನೋಡ್ತಾ ಇರಿ: ಪವನ್ ಕಲ್ಯಾಣ್ ಗೆ ಉದಯನಿಧಿ ತಿರುಗೇಟು

Krishnaveni K

ಶನಿವಾರ, 5 ಅಕ್ಟೋಬರ್ 2024 (11:07 IST)
ಚೆನ್ನೈ: ಸನಾತನ ಧರ್ಮ ನಾಶ ಕುರಿತು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮತ್ತು ತಮಿಳುನಾಡು ಡಿಸಿಎಂ ಉದಯನಿಧಿ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇಬ್ಬರೂ ಸವಾಲು-ಪ್ರತಿ ಸವಾಲು ಹಾಕಿಕೊಂಡಿದ್ದಾರೆ.

ಕೆಲವು ಸಮಯದ ಹಿಂದೆ ಉದಯನಿಧಿ, ಸನಾತನ ಧರ್ಮ ಎಂದರೆ ಡೆಂಗ್ಯೂ ನಂತಹ ವೈರಸ್ ಇದ್ದಂತೆ. ಇದನ್ನು ನಾಶ ಮಾಡಬೇಕು. ಇಲ್ಲದೇ ಹೋದರೆ ಸಮಾಜದಲ್ಲಿ ಸಮಾಧಾನ ಇರಲ್ಲ ಎಂದಿದ್ದರು. ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರ ಬಗ್ಗೆ ಈಗ ಪವನ್ ಕಲ್ಯಾಣ್ ಪ್ರಸ್ತಾಪಿಸಿ ಟೀಕಿಸಿದ್ದಾರೆ.

ಇತ್ತೀಚೆಗೆ ತಿರುಪತಿ ಲಡ್ಡು ವಿವಾದದ ಬಳಿಕ ಸನಾತನ ಧರ್ಮ ಟ್ರಸ್ಟ್ ಸ್ಥಾಪನೆಯಾಗಬೇಕು ಎಂದು ಪವನ್ ಆಗ್ರಹಿಸಿದ್ದರು. ಇದೀಗ ಈ ಹಿಂದೆ ಸನಾತನ ಧರ್ಮವನ್ನು ವೈರಸ್ ಎಂದಿದ್ದ ಉದಯನಿಧಿ ಬಗ್ಗೆ ಟೀಕಿಸಿದ್ದರು. ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸಿದವರೇ ನಾಶವಾಗಿ ಹೋಗುತ್ತಾರೆ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಉದಯನಿಧಿ, ನೋಡ್ತಾ ಇರಿ ಎಂದು ಸವಾಲು ಹಾಕಿದ್ದಾರೆ. ಇನ್ನೊಂದೆಡೆ ಉದಯನಿಧಿ ಪರವಾಗಿ ಮಾತನಾಡಿರುವ ಡಿಎಂಕೆ ವಕ್ತಾರ ಡಾ ಹಫೀಜುಲ್ಲಾ, ಹಿಂದೂಗಳ ನಿಜವಾದ ಶತ್ರುಗಳು ಚಂದ್ರಬಾಬು ನಾಯ್ಡು ಟಿಡಿಪಿ ಮತ್ತು ಬಿಜೆಪಿಯವರೇ. ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ