ಶಾಸಕ ಜಿಗ್ನೇಶ್ ಮೇವಾನಿ ಯನ್ನು ವಶಕ್ಕೆ ಪಡೆದ ಪೊಲೀಸರು. ಕಾರಣ ಏನು ಗೊತ್ತಾ...?

ಸೋಮವಾರ, 16 ಏಪ್ರಿಲ್ 2018 (08:20 IST)
ಜೈಪುರ : ನಾಗೌರ್ ಹಾಗೂ ಜೈಪುರದಾದ್ಯಂತ ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರು ಪ್ರವೇಶಿಸದಂತೆ ನಿರ್ಬಂಧ ಹೇರಿದ ಕಾರಣದಿಂದ ಭಾನುವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ರಾಜಸ್ಥಾನದ ನಾಗೌರ್ ಪ್ರದೇಶಕ್ಕೆ 'ಭಾರತೀಯ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್' ಎಂಬ ವಿಷಯದ ಕುರಿತು ಮಾತನಾಡಲು ಹೊರಟಿದ್ದ ಜಿಗ್ನೇಶ್ ಅವರನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದು ನಾಗೌರ್ ಮತ್ತು ಜೈಪುರದಾದ್ಯಂತ ನೀವು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.


ಈ ಬಗ್ಗೆ  ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ ಅವರು,’ನನ್ನ ಮೇಲೆ ನಿರ್ಬಂಧ ಹೇರಲು ವಸುಂಧರಾ ರಾಜೆ ಸರ್ಕಾರಕ್ಕೆ ಸಿಕ್ಕ ಕಾರಣವೇನು ಎಂಬುದು ನನಗೆ ಗೊತ್ತಿಲ್ಲ. ನಾನು ಜೈಪುರದಲ್ಲೂ ಸುತ್ತಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಯಾವುದೇ ಸೂಚನೆಯನ್ನೂ ನೀಡದೆ, ಯಾವ ಅಧಿಕೃತ ಆರ್ಡರ್ ಸಹ ಇಲ್ಲದೆ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಇದು ನಾಚಿಕೆಗೇಡು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ