ಕೇಂದ್ರದ ಉಜ್ವಲಾ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬುಧವಾರ, 14 ಫೆಬ್ರವರಿ 2018 (07:29 IST)
ನವದೆಹಲಿ : ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪೆಟ್ರೋಲಿಯಂ ಸಚಿವಾಲಯ ನಡೆಸುತ್ತಿರುವ ಎಲ್‌ಪಿಜಿ ಪಂಚಾಯತ್‌ ನಲ್ಲಿ ಕೇಂದ್ರದ ಉಜ್ವಲಾ ಯೋಜನೆ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಎಲ್‌ಪಿಜಿ ಪಂಚಾಯತ್‌ ನಲ್ಲಿ ಮಾತನಾಡಿದ ರಾಷ್ಟ್ರಪತಿಗಳು,’ ಇಂತಹ ಪಂಚಾಯತ್‌ 100 ಗ್ರಾಹಕರನ್ನು ಒಂದೆಡೆ ಬೆಸೆಯುವುದರ ಜತೆಗೆ ಮಹಿಳೆಯರಲ್ಲಿ ಶುದ್ಧ ಇಂಧನ ಬಳಕೆಯ ಕುರಿತು ಜಾಗೃತಿ ಮೂಡಿಸುತ್ತದೆ. ಆರೋಗ್ಯ ಸಮಸ್ಯೆ ತರುವ ಉರುವಲು ಬಳಕೆ ಕೈಬಿಟ್ಟು ಎಲ್‌ಪಿಜಿ ಗ್ಯಾಸ್‌ ಬಳಸುವಂತೆ ಗ್ರಾಮೀಣ ಮಹಿಳೆಯರನ್ನು ಉತ್ತೇಜಿಸುತ್ತದೆ. ಮಹಿಳಾ ಸಬಲೀಕರಣಕ್ಕೆ ಇಂತಹ ಪಂಚಾಯತ್‌ಗಳು ಇನ್ನಷ್ಟು ನಡೆಯಬೇಕು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ