ಕಳೆದ ತಿಂಗಳಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿ ಕಳೆದ 45 ದಿನಗಳಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ, ಬ್ರಿಗೇಡಿಯರ್ ಜಗದೀಶ್ ಗಗ್ನೇಜ( ನಿವೃತ್ತ) ಗುರುವಾರ ಮುಂಜಾನೆ ಇಲ್ಲಿಯ ಡಿಎಮ್ಸಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರ್ಎಸ್ಎಸ್ ಪಂಜಾಬ್ ಘಟಕದ ಉಪಾಧ್ಯಕ್ಷರಾಗಿರುವ ಗಗ್ನೇಜ ಅವರು ಆಗಸ್ಟ್ 6 ರಂದು ನಗರದ ಕೇಂದ್ರ ಭಾಗದಲ್ಲಿರುವ ವ್ಯಸ್ತ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್ ಏರಿ ಬಂದ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿದ್ದರು. ಘಟನೆ ನಡೆದ ಮರುದಿನ ಗಗ್ನೇಜ ಅವರನ್ನು ಡಿಎಮ್ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದಾಳಿಯಾದಾಗಿನಿಂದ ಜೀವರಕ್ಷಕದ ನೆರವಿಂದ ಬದುಕಿದ್ದ ಅವರು ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಸೋತು ನಿರ್ಗಮಿಸಿದ್ದಾರೆ.